Advertisement

ಮೈಸೂರಿನ ಲಲಿತ ಮಹಲ್‌ ಅರಮನೆ ಮಾರಾಟಕ್ಕೆ ಕೇಂದ್ರ ಹುನ್ನಾರ

05:59 PM Jan 26, 2017 | |

ಬೆಂಗಳೂರು: ರಾಜ್ಯದ ವೈಟ್‌ ಹೌಸ್‌ ಎಂದೇ ಪ್ರಸಿದ್ದವಾಗಿರುವ ಮೈಸೂರಿನ ಪ್ರತಿಷ್ಠಿತ ಪಂಚತಾರಾ ಹೊಟೇಲ್‌, ಲಲಿತ್‌ ಮಹಲ್‌ ಅರಮನೆಯನ್ನು ಖಾಸಗಿಯವರಿಗೆ ಪರಭಾರೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisement

ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿರುವ ಲಲಿತ್‌ ಮಹಲ್‌ ರಾಜ್ಯ ಸರ್ಕಾರದ ಆಸ್ತಿಯಾಗಿದ್ದು, ಖಾಸಗಿಯವರಿಗೆ ಮಾರಾಟ ಮಾಡಲು ಗ್ರೀನ್‌ ಸಿಗ್ನಲ್‌ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರುತ್ತಿರುವ ಸಂಗತಿ “ಉದಯವಾಣಿ’ಗೆ ಲಭ್ಯವಾಗಿದೆ. ರಾಜ್ಯದ ಹೆಮ್ಮೆಯ ಪ್ರತೀಕವಾಗಿರುವ ಲಲಿತ್‌ ಮಹಲ್‌ ನ್ನು ಖಾಸಗಿಕರಣಗೊಳಿಸಲು ರಾಜ್ಯ ಸರ್ಕಾರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ತೆರೆ ಮರೆಯಲ್ಲಿ ಸಂಘರ್ಷ ನಡೆಯುತ್ತಿದೆ. ಲಲಿತ್‌ ಮಹಲ್‌ ಪಂಚತಾರಾ ಹೋಟೆಲ್‌ ನ್ನು ಕೇಂದ್ರದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ನಡೆಸುತ್ತಿದೆ. ನಷ್ಟದಲ್ಲೇ ನಡೆಯುತ್ತಿರುವ ಲಲಿತ್‌ ಮಹಲ್‌ನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದೆ. ಅಷ್ಟೇ ಅಲ್ಲ, ಮಾರಾಟಕ್ಕೆ ಒಪ್ಪದಿದ್ದರೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಕಡಿತ ಮಾಡುವ ಪರೋಕ್ಷ ಎಚ್ಚರಿಕೆಯನ್ನೂ ಸಹ ನೀಡುತ್ತಿದೆ. ಇದಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ಲಲಿತ್‌ ಮಹಲ್‌ನ್ನು ನಿಮ್ಮಿಂದ ನಡೆಸಲು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರಕ್ಕೆ ವಾಪಸ್‌ ಕೊಡಿ. ನಾವು ಅದನ್ನು ನಡೆಸುತ್ತೇವೆ. ಸರ್ಕಾರದ ಕೀರ್ತಿ ಪ್ರಾಯವಾದ ಆಸ್ತಿಯನ್ನು ಮಾರಲು ಕೇಂದ್ರಕ್ಕೆ ಯಾವುದೇ ಹಕ್ಕಿಲ್ಲ ಎನ್ನುವ ಸಂದೇಶ ರವಾನಿಸಿದೆ.

 ದೇಶದ ಇತರ ರಾಜ್ಯಗಳಲ್ಲಿ ಐಟಿಡಿಸಿ ನಡೆಸುತ್ತಿ ರುವ ಪ್ರತಿಷ್ಠಿತ ಹೋಟೆಲ್‌ಗ‌ಳನ್ನು ಖಾಸಗಿಕರಣ ಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಭೋಪಾಲ್‌, ಜೈಪುರ, ಗೌಹಾಟಿ ಹಾಗೂ ರಾಂಚಿ ಪಂಚತಾರಾ ಹೊಟೆಲ್‌ಗ‌ಳನ್ನು ಖಾಸಗಿಯವರಿಗೆ ನೀಡಲು ಕೇಂದ್ರ ಸಂಬಂಧಿಸಿದ ರಾಜ್ಯಗಳಿಂದ ಒಪ್ಪಿಗೆ ಪಡೆದಿದೆ. ಲಲಿತ್‌ ಮಹಲ್‌ನೂ° ಅದೇ ಮಾದರಿಯಲ್ಲಿ ಖಾಸಗಿಯವರಿಗೆ ಮಾರಾಟ ಮಾಡಲು ರಾಜ್ಯ ಸರ್ಕಾರದ ಮನವೊಲಿಕೆಗೆ ಯತ್ನ ನಡೆಸುತ್ತಿದೆ.

ಮೈಸೂರು ಅರಮನೆಗಳಲ್ಲಿ ಎರಡನೇ ದೊಡ್ಡ ಅರಮನೆ ಇದಾಗಿದ್ದು, ಐಟಿಡಿಸಿ ಇಲ್ಲಿ ಪಂಚತಾರಾ ಹೋಟೆಲ್‌ನ್ನು ನಡೆಸುತ್ತಿದೆ.ನೂರಾರು ಕೋಟಿ ರೂ. ಬೆಲೆ ಬಾಳುವ ಈ ಅರಮನೆಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಐಟಿಡಿಸಿಗೆ 50 ವರ್ಷಗಳಿಗೆ ಗುತ್ತಿಗೆ ನೀಡಿದೆ. 1973ರಲ್ಲಿ ರಾಜ್ಯ ಸರ್ಕಾರ ಮತ್ತು ಐಟಿಡಿಸಿ ನಡುವೆ ಈ ಬಗ್ಗೆ ಒಡಂಬಡಿಕೆ ಆಗಿದೆ. ಬಳಿಕ, 2013ರಲ್ಲಿ ಇದರ ಪರಿಷ್ಕರಣೆ ಮಾಡಲಾಗಿದ್ದು, ಅದರಂತೆ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 1.25 ಲಕ್ಷ ರೂ. ಹಾಗೂ ಲಾಭಾಂಶದ ಶೇ.3ರಷ್ಟು ಹಣ ನೀಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, 2008ರಿಂದ ಕೇಂದ್ರ ಸರ್ಕಾರ ನಷ್ಟದ ನೆಪ ಹೇಳಿ ಲಾಭಾಂಶದ ಶೇ.3ರಷ್ಟು ಹಣ ನೀಡುತ್ತಿಲ್ಲ. 2023ರ ವರೆಗೂ ಗುತ್ತಿಗೆ ಅವಧಿಯಿದ್ದು, ಈ ನಡುವೆಯೇ ನಷ್ಟದ ನೆಪ ಹೇಳಿ ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ಅಲ್ಲದೆ, 1,64,354 ಚದರ ಅಡಿ ವಿಸ್ತೀರ್ಣ ಹೊಂದಿರುವ ಲಲಿತ್‌ ಮಹಲ್‌ನ್ನು ನವೀಕರಿಸುವ ಅಗತ್ಯವಿದ್ದು, ಅದಕ್ಕೆ ಕನಿಷ್ಠ 3 ಕೋಟಿ ರೂ.ಖರ್ಚಾಗುತ್ತದೆ ಎಂದು ರಾಜ್ಯಕ್ಕೆ ಮಾಹಿತಿ ರವಾನಿಸಿದೆ.

„ ರಾಜ್ಯದ ತೀವ್ರ ವಿರೋಧ: ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವ ಡಾ.ಮಹೇಶ್‌ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಕುರಿತು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ

Advertisement

ಕೇಂದ್ರ ಸರ್ಕಾರ ಲಲಿತ್‌ ಮಹಲ್‌ ಅರಮನೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ. ರಾಜ್ಯ ಸರ್ಕಾರವೇ ಅದನ್ನು ನೋಡಿಕೊಳ್ಳುತ್ತದೆ. ನಮ್ಮ ಆಸ್ತಿಯನ್ನು ಮಾರುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇಲ್ಲ. ನಮ್ಮ ಪರಂಪರೆಯ ಹೆಮ್ಮೆಯ ಮಹಲ್‌ನ್ನು ರಾಜ್ಯ ಸರ್ಕಾರವೇ ನವೀಕರಿಸುತ್ತದೆ. ಮುಖ್ಯಮಂತ್ರಿ ಸಹ ಖಾಸಗಿ ಯವರಿಗೆ ಇದನ್ನು ಮಾರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ.
 ಪ್ರಿಯಾಂಕ್‌ ಖರ್ಗೆ, ಸಚಿವ

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next