Advertisement

ಲಕ್ಷ್ಮೀ ಪುತ್ರನ ನಂಬಿ ಬಂದವರು…

03:51 PM Aug 14, 2022 | Team Udayavani |

ಉಮಾ ರೋಹಿತ್‌ ನಿರ್ಮಿಸುತ್ತಿರುವ “ಲಕ್ಷ್ಮೀ ಪುತ್ರ’ ಚಿತ್ರ ಆರಂಭವಾಗಿದೆ. ರೋಹಿತ್‌ ಅರುಣ್‌ ಈ ಚಿತ್ರದ ನಿರ್ದೇಶಕರು. ಚಾಮರಾಜನಗರ ಜಿಲ್ಲೆಯ ಸುಂದರ ಹಳ್ಳಿಯೊಂದರಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

Advertisement

ಚಂದನವನದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್‌ ಅರುಣ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಶ್ರೇಯಸ್‌ ಚಿಂಗಾ ಈ ಚಿತ್ರದ ನಾಯಕ. ಮತ್ತೂಬ್ಬ ನಾಯಕನಾಗಿ ವಿನಯ್‌ ಕುಮಾರ್‌ ಅಭಿನಯಿಸುತ್ತಿದ್ದಾರೆ. ಇವರು ಸಹ ನೃತ್ಯಗಾರರಾಗಿದ್ದಾರೆ. ಶ್ರೇಯಸ್‌ ಚಿಂಗಾ ಮತ್ತು ವಿನಯ್‌ ಕುಮಾರ್‌ ಈ ಚಿತ್ರದಲ್ಲಿ ಶಿವ ಮತ್ತು ಮಹಾದೇವ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಇತಿ ಆಚಾರ್ಯ, ಅಮಿತಾ ರಂಗನಾಥ್‌ ಹಾಗೂ ಭೂಮಿಕಾ ಗೌಡ ಈ ಚಿತ್ರದ ನಾಯಕಿಯರು. ಭೂಮಿಕಾ ಗೌಡ ಅವರಿಗೆ ಇದು ಚೊಚ್ಚಲ ಚಿತ್ರ. ಸಂಜೀವ ರೆಡ್ಡಿ ಸಂಕಲನವಿರುವ ಈ ಚಿತ್ರಕ್ಕೆ ಶ್ಯಾಮ್‌ ಸಾಲ್ವಿನ್‌ ಅವರ ಛಾಯಾಗ್ರಹಣವಿದೆ.

ಶ್ರೀವತ್ಸ ಸಂಗೀತ ನಿರ್ದೇಶನ, ಚೇತನ್‌ ಡಿಸೋಜ ಮತ್ತು ರವಿ ಜಮಖಂಡಿ ಸಾಹಸ ನಿರ್ದೇಶನ ಹಾಗೂ ರೋಹಿತ್‌ ಅರುಣ್‌ ಮತ್ತು ಚಾಮರಾಜ್‌ ಮಾಸ್ಟರ್‌ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next