Advertisement

ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ನೌಕರನಿಗೆ 10 ಲಕ್ಷ ರೂ. ವಂಚನೆ

11:42 AM Nov 15, 2022 | Team Udayavani |

ಬೆಂಗಳೂರು: ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಖಾಸಗಿ ಕಂಪನಿ ಉದ್ಯೋ ಗಿಯ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಪಡೆದ ಅಪರಿಚಿತರು 9.99 ಲಕ್ಷ ರೂ. ವಂಚಿಸಿದ್ದಾರೆ.

Advertisement

ದೊಡ್ಡಕಮ್ಮನಹಳ್ಳಿಯ ನಿವಾಸಿ ನಿತಿನ್‌ ಸಿಂಗ್‌ (45) ಹಣ ಕಳೆದುಕೊಂಡವರು. ನ.10ರಂದು ಅಪರಿಚಿತರಿಂದ ನಿತಿನ್‌ ಸಿಂಗ್‌ ಮೊಬೈಲ್‌ ಗೆ ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಸಂದೇಶ ಬಂದಿತ್ತು. ಆ ಸಂದೇಶದಲ್ಲಿದ್ದ ಲಿಂಕ್‌ಗೆ ಕ್ಲಿಕ್‌ ಮಾಡಿದ ನಿತಿನ್‌ ಸಿಂಗ್‌ ತಮ್ಮ ಕ್ರೆಡಿಟ್‌ ಕಾರ್ಡ್‌ ಮಾಹಿತಿ ನಮೂದಿಸಿದ್ದರು.

ಇದಾದ ಕೆಲ ಹೊತ್ತಿನಲ್ಲೇ ಕ್ರೆಡಿಟ್‌ ಕಾರ್ಡ್‌ನಿಂದ 9.99 ಲಕ್ಷ ರೂ. ಕಡಿತಗೊಂಡಿತ್ತು. ನಂತರ ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್‌ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next