Advertisement

ನೂಪುರ್‌ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ವಿದೇಶಿಗರಿಗೆ ಗೇಟ್‌ ಪಾಸ್‌

07:55 AM Jun 13, 2022 | Team Udayavani |

ಕುವೈಟ್‌: ಭಾರತದಲ್ಲಿ ಪ್ರವಾದಿ ಮೊಹಮ್ಮದ್‌ ನಿಂದನೆ ಮಾಡಿದ್ದನ್ನು ಖಂಡಿಸಿ ಕುವೈಟ್‌ನಲ್ಲಿ ಪ್ರತಿಭಟನೆ ಮಾಡಿದ ವಿದೇಶೀಯರನ್ನು ಗಡೀಪಾರು ಮಾಡಲಾಗುತ್ತದೆ. ಈ ಬಗ್ಗೆ ಅಲ್ಲಿನ ಸರಕಾರವೇ ಘೋಷಣೆ ಮಾಡಿದೆ.

Advertisement

ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್‌ ಶರ್ಮಾ ವಿರುದ್ಧ ಮಾಡಿದ ಹೇಳಿಕೆಯನ್ನು ಖಂಡಿಸಿ ಕುವೈಟ್‌ ಸಿಟಿಯ ಫ‌ಹಾಹೀಲ್‌ ಎಂಬಲ್ಲಿ ಜೂ.10ರಂದು ಆ ದಿನ 45ರಿಂದ 50 ಮಂದಿ ಕುವೈಟ್‌ ಸಿಟಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿ ಭಟನೆ ನಡೆಸಿದ್ದರು.

ಈ ಪೈಕಿ ಹೆಚ್ಚಿನವರು ವಿದೇಶಿ ನಾಗರಿಕರಾಗಿದ್ದಾರೆ. ಅಲ್ಲಿನ ನಿಯಮಗಳ ಪ್ರಕಾರ ವಿದೇಶೀಯರು ಪ್ರತಿಭಟನೆ ಮಾಡುವಂತೆಯೇ ಇಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿನ ಕ್ರಮ ಕೈಗೊಂಡು ಸಂದೇಶ ರವಾನಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next