Advertisement

ಕುವೈಟ್‌-ಬೆಂಗಳೂರು ವಿಮಾನ ರದ್ದು? ಮತ್ತೆ ಆತಂಕದಲ್ಲಿ ಕುವೈಟ್‌ ಕನ್ನಡಿಗರು

09:47 AM Jun 09, 2020 | sudhir |

ಮಂಗಳೂರು: ಕುವೈಟ್‌ನಿಂದ ಬೆಂಗಳೂರಿಗೆ ಜೂ. 16ಕ್ಕೆ ನಿಗದಿಯಾಗಿದ್ದ ವಿಮಾನ ಸಂಚಾರ ರದ್ದುಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೋವಿಡ್ ಹಿನ್ನೆಲೆ ಯಲ್ಲಿ ಕುವೈಟ್‌ನಿಂದ ರಾಜ್ಯಕ್ಕೆ ಮರಳುವ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಮತ್ತೆ ನಿರಾಶೆಯಾಗಿದೆ.

Advertisement

ಕೋವಿಡ್ ಸಂಕಷ್ಟದಲ್ಲಿ ಕುವೈಟ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ತುರ್ತಾಗಿ “ವಂದೇ ಭಾರತ್‌ ಮಿಷನ್‌’ನಡಿ ಏರ್‌ಲಿಫ್ಟ್‌ ಮಾಡಬೇಕೆಂಬುದು ಅಲ್ಲಿನವರು ಆಗ್ರಹಿಸಿದ್ದರು. ಬೇಡಿಕೆಗೆ ಸ್ಪಂದಿಸಿ ಮೊದಲ ವಿಮಾನ ಜೂ. 16ರಂದು ಬೆಂಗಳೂರಿಗೆ ಆಗಮಿಸುವುದಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಇದೀಗ ಕುವೈಟ್‌- ಬೆಂಗಳೂರು ವಿಮಾನದ ಮಾಹಿತಿಯು ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ ನಲ್ಲಿರುವ ವಿಮಾನಗಳ ಪಟ್ಟಿಯಲ್ಲಿ ಲಭ್ಯವಾ ಗುತ್ತಿಲ್ಲ. ಕುವೈಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ “ತಾಂತ್ರಿಕ ಸಮಸ್ಯೆ’ಯಿಂದ ಈ ವಿಮಾನ ರದ್ದಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next