Advertisement

ಅಂಗಡಿ ಕೋಣೆಗೆ ಬೆಂಕಿ : ಅಗ್ನಿಶಾಮಕ ಸಿಬ್ಬಂದಿಯಿಂದ ತುರ್ತು ಕಾರ್ಯಾಚರಣೆ

03:32 PM Jan 12, 2022 | Team Udayavani |

ಕುಷ್ಟಗಿ : ಗೋಬಿ ಮಂಚೂರಿ ಕರಿಯಲು ಗ್ಯಾಸ್ ಹೊತ್ತಿಸಿ ಮರೆತ ಪರಿಣಾಮ ತಗಡಿನ ಶೆಡ್ ಗೆ ಬೆಂಕಿ ವ್ಯಾಪಿಸಿದ ಘಟನೆ ತಾಲೂಕಿನ ತಾವರಗೇರಾದಲ್ಲಿ ನಡೆದಿದೆ.

Advertisement

ಕುಷ್ಟಗಿ ತಾಲೂಕಿನ ತಾವರಗೇರಾ ಶ್ಯಾಮೀದ್ ಅಲಿ ವೃತ್ತದಲ್ಲಿ ಹೋಟೆಲ್ ನಲ್ಲಿ ಹನುಮಾನ್ ಸಿಂಗ್ ಗೋಬಿ ಕರಿಯಲು, ಕಡಾಯಿಯಲ್ಲಿ ಎಣ್ಣೆ ಹಾಕಿ ಗ್ಯಾಸ್ ಹೊತ್ತಿಸಿದ್ದ. ಯಾವೂದೋ ಕೆಲಸಕ್ಕೆ ಅದನ್ನು ಹಾಗೆಯೇ ಬಿಟ್ಟು ಹೋಗಿದ್ದರ ಪರಿಣಾಮ ಎಣ್ಣೆ ಕಡಾಯಿಯಲ್ಲಿ ಸುಟ್ಟು ಸಿಡಿದ ಎಣ್ಣೆಯಿಂದ ತಗಡಿನ ಶೆಡ್ ಗೆ ವ್ಯಾಪಿಸಿದೆ.

ಗುಡಿಸಲಿಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕುಷ್ಟಗಿ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ‌.

ಇದನ್ನೂ ಓದಿ : ಅರಣ್ಯ ಇಲಾಖೆ ಮೀಸಲು ಅರಣ್ಯ ಹೆಸರಿನಲ್ಲಿ ನೋಟಿಸ್; ಕಾಂಗ್ರೆಸ್ ಪ್ರತಿಭಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next