Advertisement

ಕುಷ್ಟಗಿ: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ನೇಹಿತರ ದುರಂತ ಅಂತ್ಯ

09:12 PM Jan 17, 2023 | Team Udayavani |

ಕುಷ್ಟಗಿ: ಹೊಸಪೇಟೆಯ ಹುಲಿಗಿ ಕ್ರಾಸ್ ಬಳಿ ನಡೆದ ಹೆದ್ದಾರಿ ಅಪಘಾತದಲ್ಲಿ ಕುಷ್ಟಗಿ ತಾಲೂಕಿನ ಇಬ್ಬರು ಬೈಕ್ ಸವಾರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.

Advertisement

ಮೃತರನ್ನು ಕುಷ್ಟಗಿ ತಾಲೂಕಿನ ಶಾಖಾಪೂರ ಗ್ರಾಮದ ಚನ್ನಬಸವ ನವಲಹಳ್ಳಿ ಹಾಗೂ ಕೊರಡಕೇರಾ ಗ್ರಾಮದ‌ ಮುತ್ತೇಶ ಹಿರೇಮನಿ ಎಂದು ಗುರುತಿಸಲಾಗಿದೆ.

ಈ ಇಬ್ಬರು ಸ್ನೇಹಿತರು ಕೊಪ್ಪಳಕ್ಕೆ ಹೋಗಿ ನಂತರ ಹೊಸಪೇಟೆಯ ಮೂಲಕ ಕುಷ್ಟಗಿ ಕಡೆ ಬರುವಾಗ ಹುಲಗಿ ಕ್ರಾಸ್ ಬಳಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಈ ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನೊರ್ವ ಸವಾರ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

ದುರ್ಮರಣಕ್ಕೀಡಾದ ಯುವಕರ ಶವ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ, ಬುಧವಾರ ಬೆಳಗ್ಗೆ ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಫೋಟೋಗ್ರಾಫರ್ ಬಸವರಾಜ್ ಹತ್ಯೆ ಪ್ರಕರಣ: ಒಡಹುಟ್ಟಿದ ಅಕ್ಕನಿಂದಲೇ ನಡೆಯಿತು ಕೃತ್ಯ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next