Advertisement

ಅವೈಜ್ಞಾನಿಕ ಕಾಮಗಾರಿ : ಹೆದ್ದಾರಿಯ ಮೇಲ್ಸೇತುವೆ ಮೇಲೆ ಅಪಘಾತಗಳ ಸರಮಾಲೆ

07:26 PM Jun 12, 2022 | Team Udayavani |

ಕುಷ್ಟಗಿ : ಸ್ವಲ್ಪ ಮಳೆಯಾದರೂ ಸಾಕು ಕುಷ್ಟಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಮೇಲೆ ನಿಲ್ಲುತ್ತಿರುವ ನೀರಿನಿಂದ ಅಪಘಾತಗಳು‌ ಸಂಭವಿಸುತ್ತಿವೆ .

Advertisement

ಸುಗಮ‌ ಸಂಚಾರಕ್ಕಾಗಿ ಹೆದ್ದಾರಿ ಅಪಘಾತ ನಿಯಂತ್ರಿಸಲು ಕುಷ್ಟಗಿ ಹೆದ್ದಾರಿಗೆ 66 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು ಅಪಘಾತ ನಿಯಂತ್ರಣದಲ್ಲಿದೆ. ಆದರೆ‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ‌ಪ್ರಾಧೀಕಾರ (ಎನ್.ಎಚ್.ಎ.ಐ) ನಿರ್ಲಕ್ಷೆಯಿಂದಾಗಿ ಹೆದ್ದಾರಿ ಮೇಲ್ಸೇತುವೆ ಮೇಲೆ ವಿನಾಕಾರಣ ಅಪಘಾತ ಸಂಭವಿಸುತ್ತಿವೆ.

ಹೆದ್ದಾರಿ ಮೇಲ್ಸೇತುವೆ ( ಸಹದೇವಪ್ಪ ಕಟ್ಟಿಗೆ ಅಡ್ಡೆ ಪಕ್ಕದಲ್ಲಿ) ಮಳೆ ನೀರು ಹರಿಯದೇ ಒಂದೆಡೆ ತಗ್ಗು ಪ್ರದೇಶದಲ್ಲಿ ನಿಲ್ಲುತ್ತಿದ್ದು, ಇದರಿಂದ ಚಾಲಕರು ಸಹಜ ಹೆದ್ದಾರಿ ಎಂದು ಗ್ರಹಿಸಿ ಚಾಲನೆಯಿಂದ ವಾಹನಗಳು ಮುಗುಚಿ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುತ್ತಿವೆ. ಇದೇ ರೀತಿ ಎಂಟು ಅಪಘಾತಗಳು ಸಂಭವಿಸಿವೆ. ಈ ಅವಸ್ಥೆಯ ಬಗ್ಗೆ ಸ್ಥಳೀಯರು ಹೆದ್ದಾರಿ ಪ್ರಾಧೀಕಾರದ ಗಮನಕ್ಕೆ ತಂದರೂ ಪ್ರಯೋಜನೆ ಆಗಿಲ್ಲ‌. ಮೇಲ್ಸೇತುವೆ ಮೇಲೆ ನೀರು ನಿಲ್ಲದಂತೆ ಕ್ರಮವಹಿಸಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

ಈ ಕುರಿತು ಸಿಪಿಐ ಈ ವಿಷಯ ಗಮನಕ್ಕೆ ಬಂದಿರಲಿಲ್ಲ ಈ ಕೂಡಲೇ ಹೆದ್ದಾರಿ ಗುತ್ತಿಗೆವಹಿಸಿಕೊಂಡಿರುವ ಓಎಸ್ ಇ ಕಂಪನಿ ಯೋಜನಾ ವ್ಯವಸ್ಥಾಪಕ ರಾಮಪ್ಪ ಕುಬಕಡ್ಡಿ ಸಂಪರ್ಕಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.

ಇದನ್ನೂ ಓದಿ : ಸನಾತನ ಮೌಲ್ಯಗಳನ್ನು ಮಕ್ಕಳ ತಲೆಯಲ್ಲಿ ತುರುಕುವುದು ಅಪಾಯಕಾರಿ: ಕುಂ.ವೀರಭದ್ರಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next