Advertisement

ಮಳೆಯ ನಡುವೆಯೂ ವಿದುತ್ಯ್ ತಂತಿ ದುರಸ್ತಿಗೊಳಿಸಿ ಜೆಸ್ಕಾಂ‌ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ

04:28 PM Jul 05, 2022 | Team Udayavani |

ಕುಷ್ಟಗಿ: ಜೆಸ್ಕಾಂ‌ ಸಿಬ್ಬಂದಿ ಮಳೆ ಲೆಕ್ಕಿಸದೇ ವಿದ್ಯುತ್ ಕಂಬದ ತಂತಿ ಕಟ್ ಆದರೂ ಸರಿಪಡಿಸಿ‌ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

Advertisement

ಕುಷ್ಟಗಿ ಪಟ್ಟಣದ ಮಾರುತಿ ವೃತ್ತದ ತಾಲೂಕು ಪಂಚಾಯತ್ ವಾಣಿಜ್ಯ ಮಳಿಗೆಯ ಪಕ್ಕದ ವಿದ್ಯುತ್ ಕಂಬದ ತಂತಿ ಇದ್ದಕ್ಕಿದ್ದಂತೆ ಕಟ್ ಆಗಿ ಬಿದ್ದಿದೆ. ಕೂಡಲೇ ಸ್ಥಳೀಯರು ಜೆಸ್ಕಾಂ ಗಮನಕ್ಕೆ ತಂದಿದ್ದಾರೆ. ಶಾಖಾಧಿಕಾರಿ ತಾಜುದ್ದೀನ್ ಮಾರ್ಗದರ್ಶನದಲ್ಲಿ ಜೆಸ್ಕಾಂ ಸಿಬ್ಬಂದಿ ಆನಂದ್ ತೋಟಿಗಾರ ಎಂಬುವರು ಮಳೆಯ ನಡುವೆಯೂ ವಿದ್ಯುತ್ ಕಂಬ ಹತ್ತಿ ಕಟ್ ಆದ ತಂತಿ ಜೋಡಿಸಿದರು.

ಮಳೆಯಲ್ಲಿ ಇನ್ನೋರ್ವ ಸಿಬ್ಬಂದಿ ಕಾಶೀಂ ಗಡಾದ್ ಅವರು ಕಾರ್ಯ ನಿರ್ವಹಿಸಿದರು ಧೋ..ಎಂದು ಸುರಿವ ಮಳೆಯಲ್ಲಿ ಈ ಇಬ್ಬರು ಜೆಸ್ಕಾಂ ಸಿಬ್ಬಂದಿ ಕಾರ್ಯನಿರ್ವಹಣೆಯ ಫೋಟೋ ಇದೀಗ ವೈರಲ್ ಆಗಿದ್ದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜೆಸ್ಕಾಂ ಸಿಬ್ಬಂದಿಯ ಕರ್ತವ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ : ಗೋವಾ : ರೈಲ್ವೆ ಹಳಿ ಮೇಲೆ ಮರ ಬಿದ್ದು ವಾಸ್ಕೊ-ಕುಳೆ ರೈಲು ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next