Advertisement

ಗಿಡದಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಳಿಲಿಗೆ ಶಾಲಾ ಶಿಕ್ಷಕರು, ಮಕ್ಕಳಿಂದ ಆರೈಕೆ

01:06 PM Jan 12, 2022 | Team Udayavani |

ಕುಷ್ಟಗಿ: ಆಕಸ್ಮಿಕವಾಗಿ ಗಿಡದಿಂದ ಜಾರಿ ಬಿದ್ದು ಪ್ರಜ್ಞೆ ಹೀನವಾಗಿದ್ದ ಅಳಿಲಿಗೆ ಶಾಲೆಯ ಶಿಕ್ಷಕರು, ಮಕ್ಕಳು ಆರೈಕೆಯಿಂದ ಚೇತರಿಕೊಂಡಿದೆ.

Advertisement

ಕುಷ್ಟಗಿ ತಾಲೂಕಿನ ಕೊರಡಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಸಂದರ್ಭದಲ್ಲಿ ಗಿಡಗಳಲ್ಲಿ ಓಡಾಟ ನಡೆಸುತ್ತಿದ್ದ ಅಳಿಲೊಂದು ಆಯಾತಪ್ಪಿ ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು ಇದನ್ನು ಗಮನಿಸಿದ ಶಿಕ್ಷಕ ರಾಮೇಶ್ವರ ಡಾಣಿ ಅವರು, ಅಳಿಲಿಗೆ ಕ್ಷೀರ ಭಾಗ್ಯದ ಹಾಲನ್ನು ಕುಡಿಸಿದರು.

ಸ್ವಲ್ಪ ಹೊತ್ತಿನ ಬಳಿಕ ಅಳಿಲು ಚೇತರಿಸಿಕೊಂಡಿದೆ ಈ ವೇಳೆ ವಿದ್ಯಾರ್ಥಿಗಳು ಅಳಿಲಿನ ಬೆನ್ನಿಗೆ ಕೈಯಿಂದ ನೆವರಿಸಿ ಸಂತಸ ವ್ಯಕ್ತಪಡಿಸಿದರು.

ಶಾಲೆಗೆ ಆಕಸ್ಮಿಕವಾಗಿ ಬಂದ ಅಳಿಲಿಗೆ ಅಳಿಲು ಸೇವೆ ಮಾಡಿರುವುದು ಸ್ಮರಣೀಯವೆನಿಸಿದೆ.

ಇದನ್ನೂ ಓದಿ :ಕೆರೆ ಹಾವಿನೊಂದಿಗೆ ಮೂರು ವರ್ಷದ ಬಾಲಕನ ಆಟ : ವಿಡಿಯೋ ವೈರಲ್ 

Advertisement
Advertisement

Udayavani is now on Telegram. Click here to join our channel and stay updated with the latest news.

Next