Advertisement

ಕುಷ್ಟಗಿ: ಬೆಳೆಹಾನಿ ಪರಿಶೀಲನೆ

03:17 PM Nov 22, 2021 | Team Udayavani |

ಕುಷ್ಟಗಿ: ಅಕಾಲಿಕ ಬೆಳೆ ಹಾನಿಯಿಂದ ಕುಷ್ಟಗಿ ತಾಲೂಕಿನ ಎಲ್ಲಾ ಭತ್ತದ ಬೆಳೆಗೂ ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.

Advertisement

ತಾಲೂಕಿನ ಬಳೂಟಗಿ ಗ್ರಾಮದ ರೈತ ಮಕ್ಬುಲ್ ಸಾಬ್ ವಾಲೀಕಾರ ಅವರ ಭತ್ತದ ಗದ್ದೆಗೆ ಭೇಟಿ ನೀಡಿ, ಹಾನಿಯ ಅಂದಾಜು ಪರಿಶೀಲಿಸಿದ ಬಳಿಕ ಪತ್ರಿಕೆಗೆ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಅಂತರ್ಜಲ ನೀರಾವರಿ ಆಶ್ರೀತವಾಗಿ 150 ರಷ್ಟು ಹೆಕ್ಟೇರ್ ನಲ್ಲಿ ರೈತರು ಭತ್ತ ಬೆಳೆದಿದ್ದಾರೆ ಅಕಾಲಿಕ ಮಳೆಗೆ ಭತ್ತ ನೆನೆದು, ಅಲ್ಲಿಯೇ ಮೊಳಕೆಯೊಡೆದಿದೆ. ಕಟಾವು ಮಾಡಿದ್ದರೂ ತೆನೆಯ ಭತ್ತ ಭೂಮಿಯಲ್ಲಿ ಉದುರಿದೆ. ಜಿಟಿ ಜಿಟಿ ಮಳೆಯಿಂದ ಬೆಳೆ ನೆಲಕಚ್ಚಿದೆ. ಬಳೂಟಗಿ ಗ್ರಾಮದ ರೈತ ಮುಕ್ತುಂಸಾಬ್ ಅವರ 35 ಎಕರೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ಗ್ರಾಮ ಲೆಕ್ಕಾಧಿಕಾರಿ ವರದಿಯನ್ನಾಧರಿಸಿ ಸದರಿ ರೈತರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು.

ಈ ವೇಳೆ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ, ಪ್ರಕಾಶ ತಾರಿವಾಳ, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಪಾಟೀಲ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next