Advertisement

ಕುಷ್ಟಗಿ: ಶಿವಾಜಿ ಜಯಂತ್ಯೋತ್ಸವ ಮೆರವಣಿಗೆ; ಸೌಹಾರ್ದ ಮೆರೆದ ಮುಸ್ಲಿಮರು

06:04 PM Mar 01, 2023 | Team Udayavani |

ಕುಷ್ಟಗಿ: ಕುಷ್ಟಗಿಯಲ್ಲಿ ಬುಧವಾರ ಛತ್ರಪತಿ ಶಿವಾಜಿ ಜಯಂತ್ಯೋತ್ಸವದ ಆಚರಣೆಯ ಕೇಸರಿ ಧ್ವಜ ಮೆರವಣಿಗೆಯಲ್ಲಿ ಕಾರ್ಯಕರ್ತರಿಗೆ ಮುಸ್ಲಿಂ ಬಾಂಧವರು ಸ್ವಯಂ ಪ್ರೇರಿತರಾಗಿ ಪಾನಕ ವಿತರಿಸಿ ಸೌಹಾರ್ದ ಮೆರೆದರು.

Advertisement

ಇಲ್ಲಿನ ಕಾರ್ಗಿಲ್ ವೃತ್ತದಲ್ಲಿ ಆರಂಭಗೊಂಡ ಮೆರವಣಿಗೆಯಲ್ಲಿ ಕಾರ್ಯಕರ್ತರು 200 ಮೀಟರ್‌ ಉದ್ದದ ಕೇಸರಿ ಧ್ವಜಾವನ್ನು ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೈ ಜೈ ಶಿವಾಜಿ ಘೋಷಣೆ, ಭಗವಧ್ವಜ ಹಿಡಿದು ಸಂಚರಿಸಿ ಸಂಭ್ರಮಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ತೆಗ್ಗಿನ ಓಣಿಯ ಮುಸ್ಲಿಂ ಬಾಂಧವರು, ಬಿಸಿಲಿನಲ್ಲಿ ಬಾಯಾರಿದ ಕಾರ್ಯಕರ್ತರಿಗೆ ತಂಪನೆಯ ಪಾನಕ ವಿತರಿಸಿದರು. ಈ ವೇಳೆ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ಮಾತನಾಡಿ ಹಿಂದೂ-ಮುಸ್ಲಿಂ ಭಯದ ವಾತವರಣದಲ್ಲಿ ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಶಿವಾಜಿ ಕಾರ್ಯಕರ್ತರಿಗೆ ಪಾನಕ ನೀಡಿರುವುದು ಸೌಹಾರ್ದ ವಾತವರಣ ಸೃಷ್ಟಿಸಿರುವುದು ಸಂತಸದ ಸಂಗತಿ ಎಂದರು. ನೇತೃತ್ವವನ್ನು ರವಿಕುಮಾರ ಹಿರೇಮಠ, ಮಲ್ಲಿಕಾರ್ಜುನ ಮಸೂತಿ, ಪ್ರಭು ಶಂಕರಗೌಡ ಪಾಟೀಲ, ಪರಶುರಾಮ್ ನಾಗರಾಳ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next