Advertisement

ಕುಷ್ಟಗಿ: ಸವದತ್ತಿಯ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆ

09:17 PM Nov 17, 2022 | Team Udayavani |

ಕುಷ್ಟಗಿ:ಸವದತ್ತಿ ತಾಲೂಕಿನಿಂದ ಅಂಬಾಮಠ ಕ್ಷೇತ್ರಕ್ಕೆ ಹೋಗಿದ್ದ ಭಕ್ತನೋರ್ವ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

Advertisement

ಮೃತ ವ್ಯಕ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಜಬ್ಕಾಲ್ ಗ್ರಾಮದ ನಿವಾಸಿ 40 ವರ್ಷದ ಮಾರುತಿ ವಿಠ್ಠಪ್ಪ ಪೂಜಾರಿ ಎಂದು ಗೊತ್ತಾಗಿದೆ. ಮಾರುತಿ ಪೂಜಾರಿ, ಸಿಂಧನೂರು ತಾಲೂಕಿನ ಅಂಬಾಮಠ ಕ್ಷೇತ್ರಕ್ಕೆ ಹೋಗಿದ್ದ. ರಾತ್ರಿ ತಮ್ಮ ಸ್ವಗ್ರಾಮಕ್ಕೆ ವಾಪಸ್ಸಗಲು ಬಸ್ ನಿರೀಕ್ಷೆಯಲ್ಲಿ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಪ್ರಯಣಿಕರ ಆಸನದಲ್ಲಿ ಮಲಗಿದ್ದ ಬೆಳಗಾದರೂ ಮೇಲೇಳದಿದ್ದಾಗ ಕೂಡಲೇ ಸ್ಥಳೀಯ ಪೊಲೀಸ ಠಾಣೆಗೆ ಮಾಹಿತಿ ನೀಡಿದರು.

ಆತನ ಜೇಬಿನಲ್ಲಿ ಆಧಾರ ಕಾರ್ಡ್ , ಮೊಬೈಲ್ ಸಂಖ್ಯೆಗಳನ್ನು ಆಧರಿಸಿ ಮಾಹಿತಿ ನೀಡಿದಾಗ, ಅವರ ಪತ್ನಿ, ಸಹೋದರರು ಆಗಮಿಸಿದ್ದಾರೆ. ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಕ್ಕೆ ಶವವನ್ನು ಹಸ್ತಾಂತರಿಸಲಾಯಿತು. ಪ್ರಕರಣ ಕುಷ್ಟಗಿ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next