Advertisement

Kushtagi: ನೂತನ ಪಿಎಸೈ ಮುದ್ದುರಂಗಸ್ವಾಮಿ ನೇಮಕ

02:10 PM Jul 13, 2023 | Team Udayavani |

ಕುಷ್ಟಗಿ: ಇಲ್ಲಿನ ಪೋಲಿಸ್ ಠಾಣೆಯ ನೂತನ ಪಿಎಸೈ ಆಗಿ ಮುದ್ದುರಂಗಸ್ವಾಮಿ ಆಧಿಕಾರವಹಿಸಿಕೊಳ್ಳುವರು.

Advertisement

ಬಳ್ಳಾರಿ ವಲಯದ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ ಕುಮಾರ ಅವರ ಆದೇಶದ ಮೇರೆಗೆ 31 ಠಾಣಾ ಪಿಎಸೈಗಳ ವರ್ಗವಾಗಿದ್ದು, ಕುಷ್ಟಗಿ ಠಾಣಾ ಪಿಎಸೈ ಆಗಿ ಸೇವೆಯಲ್ಲಿದ್ದ ಮೌನೇಶ ರಾಠೋಡ್ ಅವರಿಗೆ ವಿಜಯನಗರ ಜಿಲ್ಲೆ ಎಂ.ಎಂ.ಹಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಕುಷ್ಟಗಿ ಪೊಲೀಸ್ ಠಾಣೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಆಗಿ ಕರ್ತವ್ಯ ನಿರ್ವಹಿಸಿದ್ದ ಮುದ್ದುರಂಗಸ್ವಾಮಿ ಅಧಿಕಾರವಹಿಸಿಕೊಳ್ಳುವರು.

ಅಂತೆಯೇ ಹನುಮಸಾಗರ ಪೊಲೀಸ್ ಠಾಣಾ ಪಿಎಸೈ ಆಗಿದ್ದ ಅಶೋಕ ಬೇವೂರು ಅವರಿಗೆ ಬಳ್ಳಾರಿ ಐಜಿಪಿ ಕಚೇರಿಗೆ ವರ್ಗವಾಗಿದ್ದು, ತೆರವಾದ ಸ್ಥಾನಕ್ಕೆ ರಾಯಚೂರು ಜಿಲ್ಲೆಯ ಬಳಗಾನೂರು ಪೊಲೀಸ್ ಠಾಣೆಯ ಪಿಎಸೈ ವಿರುಪಾಕ್ಷ ಅವರ ವರ್ಗಾವಣೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next