Advertisement

ಕುಷ್ಟಗಿ: ಬೈಕ್‌ ದುರಂತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿಧನ

12:57 PM Feb 05, 2023 | Team Udayavani |

ಕುಷ್ಟಗಿ: ಬೈಕ್ ದುರಂತದಲ್ಲಿ ತೀವ್ರಗಾಯಗೊಂಡಿದ್ದ ತಾಲೂಕಿನ ಟೆಂಗುಂಟಿ ಗ್ರಾಮದ ಬಾಲಯ್ಯ ಹನುಮಂತಯ್ಯ ಗ್ಯಾನಪ್ಪಯ್ಯನವರ್ ಭಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.‌

Advertisement

ಅವರಿಗೆ 47 ವರ್ಷ ವಯಸ್ಸಾಗಿತ್ತು. ಕಳೆದ ಫೆ.2 ರಂದು ತಮ್ಮ‌ ಸಹೋದರನೊಂದಿಗೆ ಟೆಂಗುಂಟಿಯಿಂದ ಕುಷ್ಟಗಿ ಬರುವ ಸಂದರ್ಭದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ಈ ದುರಂತ‌ ಸಂಭವಿಸಿದೆ.

ಈ ರಸ್ತೆ ಕಾಮಗಾರಿ ನಡೆಯುತ್ತಿದ್ದು, ದೊಡ್ಡ ಗಾತ್ರದ ಗುಂಡಿಯ ಮೇಲೆ ಬೈಕ್ ಸಂಚರಿಸಿದ್ದರಿಂದ ಹಿಂಬದಿಯ ಸವಾರ ಬಾಲಯ್ಯ ಗ್ಯಾನಪ್ಪನವರ್ ಬಿದ್ದು ತಲೆಗೆ ತೀವ್ರ ಗಾಯಗೊಂಡು ರಕ್ತಸ್ರಾವವಾಗಿತ್ತು.

ನಂತರ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕೊನೆಯುಸಿರೆಳೆದರು.

ಮೃತರ ಅಂತ್ಯಕ್ರಿಯೆ ಭಾನುವಾರ 2 ಗಂಟೆ ನಡೆಯಲಿದೆ. ಹಾಲುಮತ‌‌ ಸಮಾಜದ ಗುರು ಬಾಲಯ್ಯ ಗ್ಯಾನಪ್ಪಯ್ಯನವರ ಅಕಾಲಿಕ ನಿಧನದಿಂದಾಗಿ ಟೆಂಗುಂಟಿ ಗ್ರಾಮದಲ್ಲಿ ದು:ಖಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next