Advertisement

Kushtagi ; ಮಹಿಳೆಯ ಮಾಂಗಲ್ಯ ಸರ ಅಪಹರಿಸಿದ ದುಷ್ಕರ್ಮಿ

09:28 PM Oct 10, 2023 | Team Udayavani |

ಕುಷ್ಟಗಿ: ಬೈಕಿನಲ್ಲಿ ಬಂದ ದುಷ್ಕರ್ಮಿ ಮಹಿಳೆಯ 50 ಸಾವಿರ ರೂ. ಮೌಲ್ಯದ 2 ತೊಲ ಮಾಂಗಲ್ಯ ಸರ ಅಪಹರಿಸಿರುವ ಪ್ರಕರಣ ಮಂಗಳವಾರ ಸಂಜೆ ಕುಷ್ಟಗಿ ಪಟ್ಟಣದ 4ನೇ ವಾರ್ಡ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿ ನಡೆದಿದೆ.

Advertisement

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಮಹಿಳೆ ಮಂಜುಳಾ ಮಾಂಬ್ರುಕರ್ ಅವರು, ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಇರುವ ತಮ್ಮ ಮನೆಗೆ ಹೋಗುತ್ತಿದ್ದರು. ಬೈಕಿನಲ್ಲಿ ಅಪರಿಚಿತ ದುಷ್ಕರ್ಮಿ ಎದುರಿಗೆ ಬಂದವನಂತೆ ಮಾಡಿ, ಪುನಃ ಬೈಕ್ ಹಿಂತಿರುಗಿಸಿಕೊಂಡು ಬಂದು ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

ದುಷ್ಕರ್ಮಿ ಬೈಕಿನಲ್ಲಿ ವೇಗವಾಗಿ ಹೋದ ದಿಕ್ಕಿನತ್ತ ಮಹಿಳೆ ಬೆನ್ನತ್ತಿ, ಕೂಗಿ ಜನ ಸೇರಿಸುವ ಪ್ರಯತ್ನ ಮಾಡಿದರೂ, ದುಷ್ಕರ್ಮಿ ಸಿಗದೇ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಂಗಲ್ಯ ಸರ ಅಪಹರಿಸಿದ ದುಷ್ಕರ್ಮಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next