Advertisement

Kushtagi: ತೆಂಗಿನ ಸಸಿಗಳ ನಡುವೆ ಗಾಂಜಾ ಬೆಳೆದವನ ಬಂಧನ

09:37 PM Sep 23, 2023 | Team Udayavani |

ಕುಷ್ಟಗಿ: ತಾಲೂಕಿನ ಕಳಮಳ್ಳಿ ತಾಂಡದಲ್ಲಿ ತೆಂಗಿನ ಸಸಿಗಳ ಜೊತೆಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಬಂಧಿತ ಆರೋಪಿ ಮ್ಯಾದರಡೊಕ್ಕಿ ರಾಮಪ್ಪ ದೇವಪ್ಪ ರಾಠೋಡ್ ಎಂಬಾತನಾಗಿದ್ದಾನೆ. ತೆಂಗಿನ ಸಸಿಗಳ ಜೊತೆಯಲ್ಲಿ 5 ಹಸಿ ಗಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸರು ವಶಕ್ಕೆ ತೆಗೆದುಕೊಂಡರು.ಬಂಧಿತನಿಂದ 9 ಕೆ.ಜಿ.800 ಗ್ರಾಂ ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗೆಜೆಟೆಡ್ ಅಧಿಕಾರಿಗಳ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ, ಇದರ ಅಂದಾಜು ಮೌಲ್ಯ 18,500 ರೂ. ಆಗಿದೆ. ಪ್ರಕರಣ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next