Advertisement

ಕುಷ್ಟಗಿ:ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ‌ ಸಿಡಿಲಿಗೆ ಬಲಿ

08:47 PM Sep 05, 2022 | Team Udayavani |

ಕುಷ್ಟಗಿ: ತಾಲೂಕಿನ ರೈತ‌ ಸಿಡಿಲಿಗೆ ಬಲಿಯಾದ ದುರಂತ ಇಲಕಲ್ ದಮ್ಮೂರ ಸೀಮಾದಲ್ಲಿ‌ ಸೋಮವಾರ ಸಂಜೆ ಸಂಭವಿಸಿದೆ.

Advertisement

ಕಾಟಾಪೂರ ಗ್ರಾಮದ ಸಣ್ಣ ನೀಲಪ್ಪ ಮಳಿಯಪ್ಪ ಹಾದಿಮನಿ (57) ಸಿಡಿಲಿಗೆ ಮೃತ ದುರ್ದೈವಿ. ಇವರು ಕುಟುಂಬದವರು ಹಾಗೂ ಕೂಲಿಯಾಳು ಮಹಿಳೆಯರೊಂದಿಗೆ ಸೂರ್ಯಕಾಂತಿ ಕಟಾವು ಕೆಲಸದಲ್ಲಿ ನಿರತರಾಗಿದ್ದರು. ಆ ಮಳೆ ಧಾರಾಕಾರವಾಗಿ ಬಂದ ಹಿನ್ನೆಲೆಯಲ್ಲಿಸೂರ್ಯಕಾಂತಿ ಕಟಾವು ಕೆಲಸ ಬಿಟ್ಟು ಊರಿನತ್ತ ಹೆಜ್ಜೆ ಹಾಕಿದ್ದ ವೇಳೆ ಸಿಡಿಲು ಎರಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಳೆ ಹಿನ್ನೆಲೆಯಲ್ಲಿ ‌ಗಿಡದ ಆಶ್ರಯ ಪಡೆದಿದ್ದ ಸೂರ್ಯಕಾಂತಿ ಕಟಾವು ಮಾಡುವ 6ರಿಂದ 7 ಮಂದಿ ಕುಟುಂಬದವರು ಹಾಗೂ ಕೂಲಿಯಾಳು ಮಹಿಳೆಯರು, ಸಿಡಿಲಿಗೆ ಸಣ್ಣ ನೀಲಪ್ಪ ಕುಸಿದು ಬೀಳುವ ದೃಶ್ಯ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದಾರೆ.

ಮೃತ ಸಣ್ಣ ನೀಲಪ್ಪ ಹಾದಿಮನಿ ಅವರು ಪತ್ನಿ ದ್ಯಾಮವ್ವ ಇಬ್ಬರು ಪುತ್ರರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಅಮೀನಗಡ ಪಿಎಸೈ ಮಲ್ಲಿಕಾರ್ಜುನ ಕುಲಕರ್ಣಿ ಆಗಮಿಸಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next