Advertisement

ಕುಷ್ಟಗಿ: ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣ; ಗ್ರಾಮಸ್ಥರ ವಿರೋಧ

09:48 AM Mar 02, 2023 | Team Udayavani |

ಕುಷ್ಟಗಿ: ಸಾಸ್ವಿಹಾಳ ಹಾಗೂ ಜುಮ್ಲಾಪೂರ ತಲಾ 2 ಕಿ.ಮೀ.‌ ಅಂತರದ ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣವನ್ನು ಗ್ರಾಮಸ್ಥರ ವಿರೋಧ ಲೆಕ್ಕಿಸದೇ ತರಾತುರಿಯಲ್ಲಿ ನಿರ್ಮಿಸುತ್ತಿರುವುದು ಗ್ರಾಮಸ್ಥರಿಗೆ ಅಚ್ಚರಿಯಾಗಿದೆ.

Advertisement

ತಾವರಗೇರಾ-ಮುದೇನೂರು-ದೋಟಿಹಾಳ-ಇಲಕಲ್ ರಾಜ್ಯ ಹೆದ್ದಾರಿಯಲ್ಲಿ ಸಾಶ್ವಿಹಾಳ ಹಾಗೂ ಜುಮ್ಲಾಪೂರ ಮದ್ಯೆ ನಿರ್ಜನ ಪ್ರದೇಶದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ ಕಳೆದ ವಾರದಿಂದ ಆರಂಭಿಸಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಈ ಅನುದಾನದಲ್ಲಿ10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸುತ್ತಿದೆ. ಇದಕ್ಕೆ ಜುಮ್ಲಾಪೂರ ಗ್ರಾಮ ಪಂಚಾಯತಿ ಕಟ್ಟಡ ಪರವಾನಿಗೆ ನೀಡಿದೆ. ಇದೆಲ್ಲವೂ ಸರಿ ಈ ಬಸ್ ತಂಗುದಾಣ ನಿರ್ಜನ ಪ್ರದೇಶದಲ್ಲಿ ಯಾಕೆ? ಎನ್ನುವುದು ಗ್ರಾಮಸ್ಥರ ವಾದ.

ಈ ಉದ್ದೇಶಿತ ಬಸ್ ತಂಗುದಾಣಕ್ಕೆ ಸಾಸ್ವಿಹಾಳ ಹಾಗೂ ಜುಮ್ಲಾಪೂರ ಪ್ರಯಾಣಿಕರು ಬಂದು ಬಸ್ ಹತ್ತಬೇಕಾದರೆ 2 ಕಿ.ಮೀ. ಕ್ರಮಿಸಬೇಕು. ಊರಿನ ಮುಖ್ಯ ರಸ್ತೆಯಲ್ಲಿ ನಿರ್ಮಿಸಬೇಕಾದ ಬಸ್ ತಂಗುದಾಣ ಮಾರ್ಚ್ ಎಂಡ್ ನೆಪದಲ್ಲಿ ತಮಗೆ ತೋಚಿದ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ ಎನ್ನುವುದು ವಕೀಲ ಸಂಗನಗೌಡ ಪಾಟೀಲ ಆರೋಪಿಸಿದ್ದಾರೆ.

ಈ ಬಸ್ ತಂಗುದಾಣ ಎಲ್ಲಿ ಅಗತ್ಯವೋ ಅಲ್ಲಿ ನಿರ್ಮಿಸದೇ ತಮಗೆ ತೋಚಿದ ಸ್ಥಳದಲ್ಲಿ ತಂಗುದಾಣ ನಿರ್ಮಿಸಿ ಅನುದಾನ ಎತ್ತುವಳಿಗೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದರೂ ನಿರ್ಮಿಸಲು ಮುಂದಾಗಿದ್ದಾರೆ.  ಒಂದು ವೇಳೆ ಬಸ್ ತಂಗುದಾಣ ನಿರ್ಮಿಸಿದರೆ ಅನೈತಿಕ ಚಟುವಟಿಕೆಗಳ ತಾಣ ಆಗಲಿದೆ. ಆದಾಗ್ಯೂ ಕ್ಷೇತ್ರದ ಶಾಸಕ ಈ ವಿಷಯದಲ್ಲಿ ಮೌನವಾಗಿರುವುದು ಜನಸಾಮಾನ್ಯರನ್ನು ಪ್ರಶ್ನಿಸುವಂತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next