Advertisement

Crime News: ದುಷ್ಕರ್ಮಿಗಳಿಂದ ಹತನಾದ ಹನುಮನಾಳ‌ ಯುವಕ

11:04 AM Aug 20, 2023 | Team Udayavani |

ಕುಷ್ಟಗಿ:  ತಾಲೂಕಿನ ಹನುಮನಾಳ ಗ್ರಾಮದ ಹೊರವಲಯದಲ್ಲಿ‌ ಜಮೀನಿನಲ್ಲಿ ದುಷ್ಕರ್ಮಿಗಳು ಯುವಕ‌ನ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಕಲ್ಲು ಎತ್ತಿ ಹಾಕಿ ನಿರ್ದಯಿಯಾಗಿ ಕೊಲೆ ಮಾಡಿದ ಪ್ರಕರಣ ಜನತೆಯನ್ನು ಬೆಚ್ಚಿ ಬೀಳಿಸಿದೆ.

Advertisement

ಕೊಲೆಯಾದ ಯುವಕ  ಮಂಜಪ್ಪ ದ್ಯಾಮಣ್ಣ ಜಿಗರಿ(23) ಗುರುತಿಸಲಾಗಿದೆ.  ತೋಟದಲ್ಲಿ‌ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಂಜಪ್ಪನ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಕಲ್ಲು ಎತ್ತಿ ಹಾಕಿದ್ದರಿಂದ ಆತ ಸ್ಥಳದಲ್ಲಿ ಮೃತನಾಗಿದ್ದು, ತಲೆಯ ಭಾಗ ಗುರುತು ಸಿಗದಂತಾಗಿದೆ. ಭೀಭತ್ಸ ಕೊಲೆಗೆ, ವೈಯಕ್ತಿಕ ದ್ವೇಷ ಹಾಗೂ ಅನೈತಿಕ ಸಂಬಂಧದ ಹಿನ್ನೆಲೆ ಎಂಬುದಾಗಿ ಕೊಲೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಹನುಮಸಾಗರ ಠಾಣೆಯ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಸಿಪಿಐ ಯಶವಂತ ಬಿಸನಹಳ್ಳಿ ಪ್ರತಿಕ್ರಿಯಿಸಿ, ತಡರಾತ್ರಿ ಯುವಕನ ಕೊಲೆಯಾಗಿದ್ದು, ಕೊಲೆಗೆ ಕಾರಣ ಹಾಗೂ ದುಷ್ಕರ್ಮಿಗಳ ಪತ್ಯೆ ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ. ಹನುಮಸಾಗರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next