Advertisement

ಕುಷ್ಟಗಿ: ಜೆಸಿಬಿ ಬಕೆಟ್ ತಾಗಿ ಬೈಕ್ ಸವಾರ ದುರ್ಮರಣ

06:26 PM Oct 05, 2022 | Team Udayavani |

ಕುಷ್ಟಗಿ: ಜೆಸಿಬಿ ಬಕೆಟ್ ತಾಗಿ ಗಂಭಿರ ಗಾಯಗೊಂಡಿದ್ದ ಬೈಕ್ ಸವಾರ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ತಾಲೂಕಿನ ಕಲಾಲಬಂಡಿ ಗ್ರಾಮದಲ್ಲಿ ನಡೆದಿದೆ.

Advertisement

ಅಲ್ತಾಫ್ ಹುಸೇನಸಾಬ್ ತೋರಗಲ್ (21) ಮೃತ ಯುವಕ. ಕಲಾಲಬಂಡಿ ಗ್ರಾಮದಲ್ಲಿ ಶಿಥಿಲಗೊಂಡ ಏರ್ ಟ್ಯಾಂಕ್ ನೆಲಸಮಗೊಳಿಸಲಾಗಿತ್ತು ಅ.2ರಂದು ನೆಲಸಮಗೊಂಡ ಏರ್ ಟ್ಯಾಂಕ್ ಅವಶೇಷದಲ್ಲಿ ಜೆಸಿಬಿಯಿಂದ ಕಾಂಕ್ರೀಟ್ ಬೇರ್ಪಡಿಸಿ ಕಬ್ಬಿಣದ ರಾಡ್ ತೆಗೆಯುವ ವೇಳೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಅಲ್ತಾಫ್ ತೋರಗಲ್ ಗೆ ಜೆಸಿಬಿ ಬಕೆಟ್ ಬಲತೊಡೆಗೆ ಬಲವಾಗಿ ಬಡಿದಿದೆ.

ತೀವ್ರ ಗಾಯಗೊಂಡಿದ್ದ ಅಲ್ತಾಫ್  ಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅ.4ರಂದು ಚಿಕಿತ್ಸೆ ಫಲಿಸದೆ  ಕೊನೆಯುಸಿರೆಳೆದಿದ್ದಾನೆ. ಜೆಸಿಬಿ ಆಪರೇಟರ್ ಗಂಗಾಧರ ಬಸಪ್ಪ ತಳಗೇರಿ ವಿರುದ್ದ ನಿರ್ಲಕ್ಷದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next