Advertisement

Vijay Deverakonda: “ನಾನು ಮದುವೆಯಾದಾಗ..” ಮ್ಯಾರೇಜ್‌ ಲೈಫ್‌ ಹೇಗಿರಬೇಕೆಂದ ನಟ ದೇವರಕೊಂಡ

10:42 AM Jul 13, 2023 | Team Udayavani |

ಹೈದರಾಬಾದ್: ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡಾ ಸದ್ಯ ʼಖುಷಿʼ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ರೊಮ್ಯಾಂಟಿಕ್ ಲವ್‌ ಸ್ಟೋರಿ ಸಿನಿಮಾದ ಎರಡನೇ ಹಾಡು ಬುಧವಾರ (ಜು.12 ರಂದು) ರಿಲೀಸ್‌ ಆಗಿದೆ.

Advertisement

ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿ ಬಂದಿರುವ ʼಖುಷಿʼ ಸಿನಿಮಾ ಪೋಸ್ಟರ್‌ ಹಾಗೂ ಹಾಡುಗಳಿಂದ ಗಮನ ಸೆಳೆಯುತ್ತಿದೆ. ʼಅರ್ಜುನ್‌ ರೆಡ್ಡಿʼ ಜೊತೆ ಸಮಂತಾ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಎರಡನೇ ಹಾಡು ‘ಆರಾಧ್ಯ’ ಬುಧವಾರ ರಿಲೀಸ್‌ ಆಗಿದೆ. ಈ ಹಾಡಿನ ಬಗ್ಗೆ ಮಾತನಾಡುತ್ತಾ ನಟ ದೇವರಕೊಂಡಾ ತನ್ನ ಮದುವೆ ಜೀವನ ಹೇಗಿರಬೇಕು ಎಂದಿದ್ದಾರೆ.

“ಆರಾಧ್ಯ” ಹಾಡು ಯುವ ಜೋಡಿಯ ಪ್ರೀತಿಯ ಹಾಡು. ಮದುವೆಯಾದ ಒಂದು ವರ್ಷದ ಬಳಿಕ ನೀವು ನಿಮ್ಮ ಸಂಗಾತಿಯೊಂದಿಗೆ ಅನೋನ್ಯವಾಗಿ,ನಿಮ್ಮದೇ ಲೋಕದಲ್ಲಿ ಇರುವುದು. ನಿಮ್ಮಗಾಗಿರುವ ವ್ಯಕ್ತಿಗೆ ಸಾಕಷ್ಟು ಸಮಯವನ್ನು ನೀಡುವುದು ಮತ್ತು ಆ ವ್ಯಕ್ತಿಯೊಂದಿಗೆ ಹಾಯಾಗಿ ಜೀವಿಸುವುದು. ಈ ಹಾಡು ಮದುವೆ ನಂತರದ ಸುಂದರ ಸಮಯದ ಕ್ಷಣದು” ಎಂದು ನಟ ಹೇಳಿದ್ದಾರೆ.

ಈ ಹಾಡಿನಲ್ಲಿನ ಬಹಳಷ್ಟು ಕ್ಷಣಗಳು ನನ್ನ ಜೀವನದಿಂದ, ನಾನು ಅನುಭವಿಸಿದ ಅನುಭವಗಳಿಂದ ಬಂದಿದೆ. ನನಗೆ ಮದುವೆಯಾಗಿಲ್ಲ ಆದರೆ ಒಂದು ರೀತಿಯಲ್ಲಿ, ನಾನು ಮದುವೆಯಾದಾಗ ನನ್ನ ವೈವಾಹಿಕ ಜೀವನವು ಹೀಗೆ ಇರಬೇಕೆಂದು ನಾನು ಬಯಸುತ್ತೇನೆ, ”ಎಂದು ಅವರು ವಿವರಿಸಿದರು.

ನಟ ವಿಜಯ್‌ ದೇವರಕೊಂಡಾ ಹಾಗೂ ರಶ್ಮಿಕಾ ಡೇಟಿಂಗ್‌ ನಲ್ಲಿದ್ದಾರೆ ಎನ್ನುವ ವಿಚಾರ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ರಶ್ಮಿಕಾ ಕೆಫೆಯೊಂದರಲ್ಲಿ ವಿಜಯ್‌ ದೇವರಕೊಂಡಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ರಿಲೇಷನ್‌ ಶಿಪ್‌ ಬಗ್ಗೆ ಇದುವರೆಗೆ ಇಬ್ಬರು ಬಾಯಿಬಿಟ್ಟಿಲ್ಲ.

Advertisement

ʼಖುಷಿʼ ಸಿನಿಮಾ ಸೆಪ್ಟೆಂಬರ್‌ 1 ರಂದು ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next