Advertisement

ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ.. ಕರಾಳ ಘಟನೆ ಬಗ್ಗೆ ಮಾತನಾಡಿದ ನಟಿ ಖುಷ್ಬು

10:47 AM Mar 06, 2023 | Team Udayavani |

ಮುಂಬಯಿ: ಬಾಲಿವುಡ್‌ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್‌ ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಬಾಲ್ಯದಲ್ಲಾದ ಕರಾಳ ಘಟನೆಯ ಬಗ್ಗೆ ಮಾಧ್ಯಮವೊಂದರ ಜೊತೆ ನಟಿ ಖುಷ್ಬು ಮಾತನಾಡಿದ್ದಾರೆ.

Advertisement

ನಾನು ಬಾಲ್ಯದಲ್ಲಿರುವಾಗಲೇ ನನ್ನ ತಂದೆಯಿಂದಲೇ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಾಯಿ ಮೇಲೆ ತಂದೆ ಪ್ರತಿನಿತ್ಯ ದೌರ್ಜನ್ಯವೆಸಗುತ್ತಿದ್ದರು. ನನ್ನ ಬಾಲ್ಯ ದೌರ್ಜನ್ಯದ ದಿನಗಳಿಂದ ಕಳೆಯಿತು. ನಾನು 8 ವರ್ಷದವಳಿದ್ದಾಗ ನನ್ನ ತಂದೆಯೇ ನನ್ನ ಮೇಲೆ ಲೈಂಗಿಕವಾಗಿ ದೌರ್ಜನ್ಯವನ್ನು ಎಸೆಗುತ್ತಿದ್ದರು ಎಂದು ಕರಾಳ ದಿನದ ಬಗ್ಗೆ ಮಾತನಾಡಿದ್ದಾರೆ.

ನನ್ನ ಮೇಲೆ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳವುದು ಬಹುಶಃ ನನ್ನ ತಾಯಿಗೂ ಸಾಧ್ಯವಾಗಿಲ್ಲ. ಏಕೆಂದರೆ ನನ್ನ ತಾಯಿ ಆತನ ಪತಿ ಏನೇ ಮಾಡಿದರೂ ಆತನೇ ತನ್ನ ಪರಮ ಧೈವ ಎನ್ನುವ ಮನಸ್ಥಿತಿಯ ವಾತಾವರಣದಲ್ಲಿ ಬೆಳೆದವರು. ನನಗೆ 15 ವರ್ಷವಾದಾಗ ನನ್ನ ತಂದೆಯ ಕ್ರೌರ್ಯತೆ ವಿರುದ್ಧ ನಾನು ಧ್ವನಿ ಎತ್ತಿದೆ. ನನಗೆ 16 ವರ್ಷವೂ ಆಗಿರಲಿಲ್ಲ ತಂದೆ ನಮ್ಮನ್ನು ಬಿಟ್ಟು ಹೋದರು. ಮುಂದಿನ ಊಟ ಎಲ್ಲಿಂದ ಬರುತ್ತದೆ ಎನ್ನುವುದು ಆ ವೇಳೆಗೆ ನಮಗೆ ಗೊತ್ತಿರಲಿಲ್ಲ ಎಂದು ನಟಿ ಹೇಳಿದರು.

ನಟಿ, ನಿರೂಪಕಿ, ನಿರ್ಮಾಪಕಿಯಾಗಿ ಬಣ್ಣದ ಲೋಕದಲ್ಲಿ ಮಿಂಚಿದ ಖುಷ್ಬು 2010 ರಲ್ಲಿ ಡಿಎಂಕೆ ಪಕ್ಷಕ್ಕೆ ಸೇರಿ ರಾಜಕೀಯ ಯಾನವನ್ನು ಆರಂಭಿಸಿದರು. ಆ  ಬಳಿಕ ಕಾಂಗ್ರೆಸ್‌ ಸೇರಿ 2021 ರಲ್ಲಿ ತಮಿಳುನಾಡು ವಿಧಾನ ಸಭೆಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸದ್ಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next