Advertisement

ಕುರುಗೋಡು: ಟ್ರ್ಯಾಕ್ಟರ್ ಗೆ ಢಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸಾವು

03:08 PM Jan 05, 2022 | Team Udayavani |

ಕುರುಗೋಡು: ಕೃಷಿ ಕೆಲಸಕ್ಕಾಗಿ ತೆರಳಿ ಸಂಜೆ ಒಂದೇ ಬೈಕ್ ನಲ್ಲಿ ಮರಳುತ್ತಿದ್ದ ಮೂವರು ಯುವಕರು ಟ್ರಾಕ್ಟರ್ ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

Advertisement

ಮೃತ ದುರ್ದೈವಿಗಳು ಬಾದನಹಟ್ಟಿ ಗ್ರಾಮದ ಕರಿಬಸಪ್ಪ (25), ದೊಡ್ಡಬಸಪ್ಪ (27), ಗೊಲ್ಲರ ಗೋಪಾಲ (28) ಎಂದು ತಿಳಿದು ಬಂದಿದೆ.

ಬಾದನಹಟ್ಟಿ ಗ್ರಾಮದಿಂದ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ಹೊರ ರಸ್ತೆ ಯಲ್ಲಿ ಗೊಲ್ಲರ ಗೋಪಾಲ ಅವರ ಗದ್ದೆ ಕೆಲಸಕ್ಕೆ ಹೋಗಿ ಸಂಜೆ ಮರಳಿ ಬರುವ ಸಂದರ್ಭದಲ್ಲಿ ರಸ್ತೆ ಯಲ್ಲಿ ಕುರುಗೋಡು ನಿವಾಸಿ ಬಸವರಾಜ್ ಅವರು ಯಾವುದೇ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದೆ ಟ್ರಾಕ್ಟರ್ ನಿಲ್ಲಿಸಿದ್ದರಿಂದ ಅದಕ್ಕೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟ ಗೊಲ್ಲರ ಗೋಪಾಲ ಪತ್ನಿ ಸೇರಿದಂತೆ 2 ಗಂಡು, 1 ಹೆಣ್ಣುಮಗುವಿದ್ದು, ಕರಿಬಸವ ಗೆ ಪತ್ನಿ ಸೇರಿದಂತೆ 3 ಮಕ್ಕಳು ಇದ್ದು, ದೊಡ್ಡಬಸಪ್ಪ ರ ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದು ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next