ಶಿರ್ವ: ಇಲ್ಲಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ನೇತೃತ್ವದ ತಂಡ ಮೇ 5ರಂದು ರಾತ್ರಿ ಬಂಧಿಸಿದ್ದಾರೆ.
ಇಕ್ಬಾಲ್ ಆಲಿಯಾಸ್ ಇಕ್ಬಾಲ್ ಶೇಖ್ ಆಲಿಯಾಸ್ ಇಕ್ಬಾಲ್ ಅಹಮದ್(32), ಪರ್ವೇಜ್ (24), ಅಬ್ದುಲ್ ರಾಕಿಬ್ (20), ಮೊಹಮ್ಮದ್ ಸಕ್ಲೇನ್(23), ಸಲೇಮ್ ಆಲಿಯಾಸ್ ಸಲೀಂ (19), ಅನಾಸ್ (19) ಬಂಧಿತರು. ಬಂಧಿತರಲ್ಲಿದ್ದ ಡ್ರ್ಯಾಗನ್ ಒಂದು, ಮೆಣಸಿನ ಹುಡಿ ಪ್ಯಾಕೆಟ್, 3 ಮರದ ವಿಕೆಟ್, 3 ದ್ವಿಚಕ್ರ ವಾಹನ ಮತ್ತು 4 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 2,31,000 ರೂ. ಆಗಬಹುದು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.