Advertisement

ನೈಜ ಘಟನೆ ಸುತ್ತ ‘ಕುಂತಿ ಪುತ್ರ’

04:58 PM Sep 17, 2021 | Team Udayavani |

“ಕುಂತಿ ಪುತ್ರ’- ಇದು ಹೊಸಬರ ಸಿನಿಮಾ ವೊಂದರ ಟೈಟಲ್‌. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಹೊಸಬರ ತಂಡ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ರಾಜು ಬೋನಗಾನಿ ಈ ಚಿತ್ರದ ನಿರ್ದೇಶಕರು.

Advertisement

ಶಶಾಂಕೌ ಗೌಡ ಅವರ ನಿರ್ಮಾಣದಲ್ಲಿ “ಕುಂತಿ ಪುತ್ರ’ ತಯಾರಾಗಿದೆ. ಚಿತ್ರದಲ್ಲಿ ಗೋಪಿಕೃಷ್ಣ ನಾಯಕ. ಇವರಿಗೆ ಪ್ರಿಯಾಂಕ ಚೌಧರಿ ನಾಯಕಿ. ಇದು1990ರಲ್ಲಿ ನಡೆದ ನೈಜ ಘಟನೆ ಯೊಂದನ್ನು ಆಧರಿಸಿ ತಯಾರಾದ ಚಿತ್ರ ಎಂಬುದು ಚಿತ್ರತಂಡದ ಮಾತು.

ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ನೇರ ನುಡಿಯ ನಾಯಕ, ಅನ್ಯಾಯವನ್ನು ಖಂಡಿಸುತ್ತಾ ಬರುತ್ತಾನೆ. ಆದರೆ, ಘಟನೆಯೊಂದರಲ್ಲಿ ಹಳ್ಳಿ ಜನ ಆತನನ್ನು ತಪ್ಪು ತಿಳಿದುಕೊಳ್ಳುತ್ತಾರೆ. ಇದು ಮುಂದೆ ದೊಡ್ಡ ಅವಾಂತರಕ್ಕೆ ಕಾರಣವಾಗುತ್ತದೆ. ಮುಂದೆ ಇದರಿಂದ ಏನೇನಾಗುತ್ತದೆ ಎಂಬುದು ಚಿತ್ರದ ಕಥೆ’ ಎಂಬುದು ಚಿತ್ರತಂಡದ ಮಾತು.

ಚಿತ್ರದ ನಿರ್ಮಾಪಕ, ನಿರ್ದೇಶಕ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ನಾಯಕ ಗೋಪಿಕೃಷ್ಣ ಹೇಳುವಂತೆ, “ಇದು ಪಕ್ಕಾ ಕಮರ್ಷಿಯಲ್‌ ಸಿನಿಮಾವಾಗಿದ್ದು, ಇಂದಿನ ಟ್ರೆಂಡ್‌ ಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ. ಹಾಗಾಗಿ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬುದು ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next