ಕುಣಿಗಲ್ : ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ತಾಲೂಕಿನ ರಾಷ್ಟಿçÃಯ ಹೆದ್ದಾರಿ ೭೫ ಅಂಚೇಪಾಳ್ಯ ಸಮೀಪ ಮಂಗಳವಾರ ನಡೆದಿದೆ.
ತಾಲೂಕಿನ ಹುತ್ರಿದುರ್ಗ ಹೋಬಳಿ ಗ್ರಾಮದ ಮನು ಕೆಲಸದ ನಿಮತ ಬೈಕ್ನಲ್ಲಿ ಅಂಚೇಪಾಳ್ಯಕ್ಕೆ ಬಂದು ಹೋಟೆಲ್ ಮುಂಭಾದದ ರಸ್ತೆ ಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದನ್ನು, ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ ಕ್ಯಾಂಟರ್ ಅತಿ ವೇಗವಾಗಿ ನುಗ್ಗಿತು, ಇದನ್ನು ಗಮನಿಸಿದ ಮನು ಕ್ಷರ್ಣಾದದಲ್ಲಿ ಬೈಕ್ ಅನ್ನು ಬಿಟ್ಟು ಹೋಡಿ ಹೊದನ್ನು ಆದರೆ ಬೈಕ್ ಸಂಪೂರ್ಣ ನಜ್ಜು ನುಜ್ಜಾಯಿತು, ಮನು ಎಚ್ಚರಗೊಳ್ಳದಿದ್ದಲ್ಲಿ ಆತನ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು, ಕ್ಷಣಾರ್ಧಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಪಲ್ಟಿಯಾದ ಕಾರು: ಮತ್ತೋಂದು ಘಟನೆಯಲ್ಲಿ ಬೆಂಗಳೂರು ಹೆಗ್ಗನಹಳ್ಳಿಯಿಂದ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಬೆಟ್ಟಹಳ್ಳಿ ಗ್ರಾಮಕ್ಕೆ ಹಬ್ಬಕೆಂದು ಹೋಗುತ್ತಿದ್ದ ಇನೋವ ಕಾರು ಚಾಲಕನ ರಸ್ತೆ ಉಬ್ಬು ಇರುವುದನ್ನು ಅರಿಯದೇ ವೇಗವಾಗಿ ಬಂದಿದ್ದಾನೆ, ಆದರೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಉಬ್ಬು ಹಾರಿ, ಸುಮಾರು ಎರಡು ಅಡಿ ಕಾರು ಎತ್ತರಕ್ಕೆ ಹಾರಿ, ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ ಸ್ಕಾರಪಿಯೋ ಕಾರಿಗೆ ಡಿಕ್ಕಿ ಹೊಡೆದಿದೆ, ಕಾರು ವೇಗದ ರಬಸಕ್ಕೆ ಕಾರು ಪಲ್ಟಿಯಾಗಿದೆ, ಕಾರಿನಲ್ಲಿ ಹೆಗ್ಗನಹಳ್ಳಿಯ ಶ್ರೀನಿವಾಸ್ ಸೇರಿದಂತೆ ನಾಲ್ವರು ಇದ್ದರು ಎನ್ನಲಾಗಿದ್ದು, ಹಲವರಿಗೆ ಸಣ್ಣಪುಟ್ಟಗಾಯವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಶಿರ್ವ: ಬಚ್ಚಲು ಮನೆಗೆ ಬೆಂಕಿ… ಅಪಾರ ಹಾನಿ