Advertisement

ಕುಣಿಗಲ್ : ನಾಯಿ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಬೈಕ್ ಸವಾರ

03:00 PM Aug 17, 2022 | Team Udayavani |

ಕುಣಿಗಲ್ : ದಾರಿಗೆ ಅಡ್ಡ ಬಂದ ನಾಯಿಯ ಜೀವ ಉಳಿಸಲು ಹೋಗಿ ದ್ವಿಚಕ್ರ ವಾಹನದಿಂದ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ‌ ಕೊತ್ತಗೆರೆ ಪೈಂಟ್ ಕಾರ್ಖಾನೆ ಬಳಿ ಬುಧವಾರ ಸಂಬವಿಸಿದೆ,

Advertisement

ತಾಲೂಕಿನ ಕೊತ್ತಗೆರೆ ಹೋಬಳಿ ವೆಂಕಟರೆಡ್ಡಿ ಪಾಳ್ಯ ಗ್ರಾಮದ ವಾಸಿ ಗಂಗಾಧರ್ (45) ಮೃತ ವ್ಯಕ್ತಿ.

ಘಟನೆ ವಿವರ : ಕೆಲಸದ ನಿಮಿತ್ತ ಗಂಗಾಧರ ಅವರು ಕುಣಿಗಲ್ ಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಕೊತ್ತಗೆರೆಯ ಪೈಂಟ್ ಕಾರ್ಖಾನೆ ಎದುರು ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ, ಈ ವೇಳೆ ನಾಯಿಯ ಜೀವ ಉಳಿಸಲು ಹೋಗಿ ಬೈಕ್ ನಿಂದ ಬಿದ್ದ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ : ಕಚ್ಚಾ ತೈಲ ಆಮದು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಎಸ್. ಜೈಶಂಕರ್

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next