Advertisement

ಬೈಕ್ ಲಾರಿ‌ ನಡುವೆ ಭೀಕರ ಅಪಘಾತ : ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೇಜರ್ ಸ್ಥಳದಲ್ಲೇ ಸಾವು

10:00 PM Jun 08, 2022 | Team Udayavani |

ಕುಣಿಗಲ್ : ಗ್ಯಾಸ್ ಲಾರಿ ಹಾಗೂ, ಬೈಕ್ ನಡುವೆ ಮುಖಾಮುಕಿ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ‌ ಎಡಿಯೂರು ಹೋಬಳಿ ಆಲಪ್ಪನಗುಡ್ಡೆ ಸಮೀಪ ಬುಧವಾರ ರಾತ್ರಿ ಸಂಬವಿಸಿದೆ.

Advertisement

ತಾಲೂಕಿನ ಎಡಿಯೂರು ಹೋಬಳಿ ಮಾಗಡಿಪಾಳ್ಯ ಗ್ರಾಮದ ಕಿಚ್ಚನಹಳ್ಳಿ ಮನೆ ಹೋಟೆಲ್ ನ ಮ್ಯಾನೇಜರ್ ಮಂಜುನಾಥ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ

ಮಂಜುನಾಥ್ ಕುಣಿಗಲ್ ಕಡೆಯಿಂದ ಕಿಚ್ಚನ ಹಳ್ಳಿ‌ಮನೆ ಕಡೆಗೆ ಬೈಕ್ ನಲ್ಲಿ ಹೊಗುತ್ತಿದ್ದಾಗ ಎಡಿಯೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಗ್ಯಾಸ್ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ, ಪರಿಣಾಮ ಬೈಕ್ ಸವಾರ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಘಟನಾ ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ 18 ತಿಂಗಳ ಮಗುವನ್ನು ರಕ್ಷಿಸಿದ ಸೇನೆ; ವಿಡಿಯೋ

Advertisement

Udayavani is now on Telegram. Click here to join our channel and stay updated with the latest news.

Next