Advertisement

ಕುಣಿಗಲ್: ಪ್ರತ್ಯೇಕ ಅಪಘಾತ, ಇಬ್ಬರು ಸಾವು, ಇಬ್ಬರಿಗೆ ಗಾಯ

09:16 PM Apr 01, 2023 | Team Udayavani |

ಕುಣಿಗಲ್: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಅಮೃತೂರು ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಅಮೃತೂರು ಹೋಬಳಿ ಹೊಳಗೆರೆಪುರ ಗ್ರಾಮದ ರಾಮ್‌ದಾಸ್ (೫೫) ಹಾಗೂ ಹುಲಿಯೂರುದುರ್ಗ ಹೋಬಳಿ ತೊರೆಬೊಮ್ಮನಹಳ್ಳಿ ಗ್ರಾಮದ ರುದ್ರೇಶ್ (೩೧) ಮೃತ ದುರ್ದೈವಿಗಳು.

ರಾಮ್‌ದಾಸ್ ತನ್ನ ಗ್ರಾಮದಿಂದ ಹೊಸಕೆರೆಗೆ ಬಂದು ತಮ್ಮ ಸಂಬಂಧಿಕರಿಗೆ ಹಬ್ಬಕೆ ಹೇಳಿ ತಮ್ಮ ಗ್ರಾಮ ಹೊಳಗೆರೆಪುರಕ್ಕೆ ವಾಪಸ್ಸ್ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದರು, ಬಸ್ ಬಂದ ಕಾರಣ ರಸ್ತೆ ದಾಟುತ್ತಿದ್ದ ವೇಳೆ, ಅಮೃತೂರಿನಿಂದ ಯಡವಾಣಿ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಾಮ್‌ದಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಬೈಕ್‌ನಲ್ಲಿ ಇದ್ದ ಇಬ್ಬರಿಗೆ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ರುದ್ರೇಶ್ ಎಂಬ ವ್ಯಕ್ತಿ ಕೆಲಸದ ನಿಮಿತ ತನ್ನ ಗ್ರಾಮ ತೊರೆಬೊಮ್ಮನಹಳ್ಳಿ ಗ್ರಾಮದಿಂದ ಹುಲಿಯೂರುದುರ್ಗಕ್ಕೆ ಹೊಗುತ್ತಿರಬೇಕಾದರೆ, ಸುಗ್ಗನಹಳ್ಳಿ ಹಾಗೂ ತೊರೆಬೊಮ್ಮನಹಳ್ಳಿ ಮಧ್ಯೆ ಯಡವಾಣಿ ಕಡೆಯಿಂದ ಹುಲಿಯೂರುದುರ್ಗ ಕಡೆಗೆ ಹೋಗುತ್ತಿದ್ದ ಕಾರು ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ರುದ್ರೇಶನ್ನು ತೀವ್ರವಾಗಿ ಗಾಯಗೊಂಡನ್ನು ಅಸ್ಪತ್ರೆಗೆ ಕರೆದ್ಯೋಯುವ ಮಾರ್ಗದ ಮಧ್ಯೆ ರುದ್ರೇಶನ್ನು ಮೃತಪಟ್ಟಿದ್ದು ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದು ವಿಶ್ವ ದಾಖಲೆ ನಿರ್ಮಿಸಿದ 4ರ ಪೋರ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next