Advertisement

Kunigal; ಜೂಜು ಅಡ್ಡೆ ಮೇಲೆ‌‌ ಪೊಲೀಸರ ದಾಳಿ: ನಾಲ್ವರ ಬಂಧನ

10:27 PM Sep 20, 2023 | Team Udayavani |

ಕುಣಿಗಲ್ : ಜೂಜು ಅಡ್ಡೆ ಮೇಲೆ ಕುಣಿಗಲ್ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಪಣಕ್ಕೆ ಇಟ್ಟಿದ ಹಣವನ್ನು ವಶ‌ ಪಡಿಸಿಕೊಂಡಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಯಲಗಲವಾಡಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

Advertisement

ಶ್ರೀಧರ, ಕೃಷ್ಣ, ಸುಹುಲ್ ಪಾಷ, ನಾರಾಯಣ ಬಂಧಿತ ಆರೋಪಿಗಳು. ಶ್ರೀಧರ ಮತ್ತು ಇತರರು ಜೂಜು ಆಟವಾಡುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಎಸ್ಪಿ, ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ವೃತ್ತ ನಿರೀಕ್ಷಕ ನವೀನ್ ಗೌಡ ಅವರ ನೇತೃತ್ವದ ಪೊಲೀಸ್ ತಂಡ ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ, ಪಣಕ್ಕೆ ಇಟ್ಟಿದ ಎಂಟು ಸಾವಿರದ ನೂರು ರೂಗಳನ್ನು ವಶ ಪಡಿಸಿಕೊಳ್ಳಲಾಗಿದೆ‌ ಎಂದು ಪೊಲೀಸ್‌ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next