Advertisement

ಕುಣಿಗಲ್: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

02:27 PM Jul 31, 2022 | Team Udayavani |

ಕುಣಿಗಲ್: ಕಾರು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ತಾಲೂಕಿನ   ಹಳೇಯ ರಾಷ್ಟ್ರೀಯ ಹೆದ್ದಾರಿ 48 ಆಲಪ್ಪನಗುಡ್ಡೆ ಬಳಿ ನಡೆದಿದೆ.

Advertisement

ತಾಲೂಕಿನ ಎಡಿಯೂರು ಹೋಬಳಿ ಆಲಪ್ಪನಗುಡ್ಡೆ ಗ್ರಾಮದ ನಿವಾಸಿ ನಯಾಜ್ ಅಹಮದ್ (45) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

ಘಟನೆ ವಿವರ: ಶನಿವಾರ ರಾತ್ರಿ 7-30 ರ ಸಮಯದಲ್ಲಿ ನಯಾಜ್ ಅಹಮದ್ ಹಾಗೂ ಇವರ ತಮ್ಮ ಶೇಖ್ ಮೊಹಿದ್ದೀನ್ ಇಬ್ಬರು ಆಲಪ್ಪನಗುಡ್ಡೆ ಗ್ರಾಮದಿಂದ ಆಲಪ್ಪನಗುಡ್ಡೆ ಬ್ರಿಡ್ಜ್ ಕಡೆಗೆ ನಡೆದುಕೊಂಡು ಹೊಗುತ್ತಿರಬೇಕಾದರೆ, ಕುಣಿಗಲ್ ಕಡೆಯಿಂದ ಹಾಸನ ಕಡೆಗೆ ಹೊಗುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ನಯಾಜ್ ಅಹಮದ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಫಾಜಿಲ್‌ ಹತ್ಯೆಗೆ ಬಳಸಿದ ಕಾರು ಕಾರ್ಕಳ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆ

ಕೂಡಲೇ ನಯಾಜ್‌ ಅಜಮದ್‌ ಅವರನ್ನು ಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆ ಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Advertisement

ಕುಣಿಗಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next