Advertisement

ಕುಣಿಗಲ್: ಕೆಂಪೇಗೌಡರಿಗೆ ಅಪಮಾನವಾದ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ: ಕೆಂಪೇಗೌಡ ಸೇನೆ ತಿರ್ಮಾನ

12:44 PM Jun 30, 2022 | Team Udayavani |

ಕುಣಿಗಲ್: ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದ ಕುಣಿಗಲ್ ಪಟ್ಟಣದ  ಗ್ರಾಮ ದೇವತೆ ಸರ್ಕಲ್ ಬಳಿ ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ಕೆಂಪೇಗೌಡ ಸೇನಾ ಸಮಿತಿ ತಿರ್ಮಾನಿಸಿದೆ,

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇನೆಯ ಕಾರ್ಯಧ್ಯಕ್ಷ ಕೊತ್ತಗೆರೆ ಚಂದ್ರಪ್ಪ, ಅಧ್ಯಕ್ಷ ಜಗದೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಅವರ ಜಂಟಿ ಪತ್ದಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ 27 ರಂದು ನಡೆದ ಕೆಂಪೇಗೌಡ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗೌಡರ ಪ್ಲೇಕ್ಸ್ ಅನ್ನು ಪುರಸಭೆಯ ಕಸದ ವಾಹನಕ್ಕೆ ಕಟ್ಟಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ, ಇದಕ್ಕೆ ಪ್ರತಿಯಾಗಿ ಯಾವ ಸ್ಥಳದಲ್ಲಿ ಕೆಂಪೇಗೌಡ ಅವರಿಗೆ ಅಪಮಾನ ಮಾಡಲಾಯಿತೋ ಆ ಸ್ಥಳದಲ್ಲಿ ಮೂರು ತಿಂಗಳ ಒಳಗೆ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿ ಪ್ರತಿಮೆಯನ್ನು ಅದಿಚುಂಚನಗಿರಿ ಸಂಸ್ಥಾನ‌ ಮಠದ ನಿರ್ಮಾಲನಂದ ಸ್ವಾಮಿಜಿ ಅವರಿಂದ  ಅನಾವರಣಗೊಳಿಸುವ ಜತೆಗೆ ಅದ್ದೂರಿಯಾಗಿ  ಕೆಂಪೇಗೌಡರ  ಜಯಂತಿ ಕಾರ್ಯಕ್ರಮ  ಮಾಡಲಾಗುವುದು ಎಂದರು. ಇದಕ್ಕೆ ತಾಲೂಕು ಆಡಳಿತ ಹಾಗೂ ಪುರಸಭೆ ಅವಕಾಶ ನೀಡಬೇಕೆಂದು ಹಾಗೂ ನಿರ್ಮಾಣ ಕ್ಕೆ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು.

ಶಾಸಕರ ಲೋಪದಿಂದ ಅವ್ಯವಸ್ಥೆ: ಶಾಸಕ ಡಾ.ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ತಿರ್ಮಾನದಂತೆ ಕಾರ್ಯಕ್ರಮ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿತ್ತು. ಇದನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ ಈ ಎಲ್ಲಾ ಅವ್ಯವಸ್ಥೆಗೆ ಶಾಸಕರೇ ನೇರ ಹೊಣೆ ಎಂದು ಆರೋಪಿಸಿದರು.

ಅಮಾಯಕರನ್ನು ಬಲಿ ಕೊಡಬೇಡಿ : ಕಾರ್ಯಕ್ರಮದಲ್ಲಿ  ಕಸದ ಗಾಡಿಗೆ ಬ್ಯಾನರ್ ಹಾಗೂ ಬಾಳೇ ಕಂದು ಕಟ್ಟಿದ ಅಮಾಯಕ ಚಾಲಕರನ್ನು ಸೇವೆಯಿಂದ ಅಮಾನತು ಮಾಡಲು ಅಧಿಕಾರಿಗಳು ಹೊರಟ್ಟಿದ್ದಾರೆ. ಇದು ನಡೆಯಬಾರದು ಎಂದು ತಿಳಿಸಿದರು.

ಹೋರಾಟಕ್ಕೆ ಇಂತಿಶ್ರೀ : ಲೋಪದೋಷ ಸಂಬಂದ ಅಧಿಕಾರಿಗಳು ಕ್ಷೇಮೆ ಕೊರಿದ ಹಿನ್ನಲೆಯಲ್ಲಿ  ಮಾಡಲು ಉದ್ದೇಶಿಸಿದ ಹೋರಾಟವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

Advertisement

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್ ಹರೀಶ್, ಮಾಜಿ ಸದಸ್ಯರಾದ  ಜಯರಾಮಯ್ಯ, ಈ ಮಂಜು, ದಲಿತ ಮುಖಂಡ ವರದರಾಜು, ಗ್ರಾ.ಪಂ ಸದಸ್ಯ ತರಿಕೆರೆ ಪ್ರಕಾಶ್ ಮಾಜಿ ಸದಸ್ಯ ಮೂರ್ತಿ, ಮುಖಂಡರಾದ ತೋಪೇಗೌಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next