Advertisement

ಕೆಂಪೇಗೌಡ ಭಾವಚಿತ್ರಕ್ಕೆ ಅಪಮಾನ : ತಪ್ಪಿಸ್ಥರ ವಿರುದ್ದ ಕ್ರಮ ; ಶಾಸಕ ಡಾ.ರಂಗನಾಥ್

09:27 PM Jun 27, 2022 | Team Udayavani |

ಕುಣಿಗಲ್ : ಪುರಸಭೆಯ ಕಸ ಸಾಗಿಸುವ ವಾಹನದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರ ಮೆರವಣಿಗೆ ಸಂಬಂಧ ಪ್ರತಿಕ್ರಿಯಿಸಿದ ಶಾಸಕ ಡಾ.ಹೆಚ್.ರಂಗನಾಥ್ ನನ್ನ ಗಮನಕ್ಕೆ ಭಾರದೇ ಅಚಾತುರ್ಯ ನಡೆದಿದೆ, ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದ್ದಾಗಿ ತಿಳಿಸಿದ್ದಾರೆ.

Advertisement

ಸೋಮವಾರ ಸಂಜೆ ಉದಯವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಶಾಸಕರು ಎಂದು ಇಲ್ಲದಂತಹ ಇಂದು ನಾಡಪ್ರಭು ಕೆಂಪೇಗೌಡ ಅವರ ಜಯಂತೋತ್ಸವ ಕಾರ್ಯಕ್ರಮ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು, ತಾಲೂಕಿನಾದ್ಯಂತ ನೂರಾರು ಮಂದಿ ಭಾಗವಹಿಸಿದರು, ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಕೆಂಪೇಗೌಡ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು, ಆದರೆ ಕಸ ತುಂಬುವ ವಾಹನವನ್ನು ಸಿಂಗರಿಸಿದ ಕಾರಣ ವಾಹನ ಯಾವುದೆಂದು ಗೊತ್ತಾಗಲಿಲ್ಲ, ಕಾರ್ಯಕ್ರಮ ಮುಗಿದ ಬಳಿಕ ಕೆಲವರು ಈ ವಿಷಯ ತಿಳಿಸಿದ ಮೇಲೆ ಗೊತ್ತಾಯಿತು, ಇದು ಆಗ ಬಾರದಾಗಿತ್ತು, ನಾನು ಸಹಾ ಒಕ್ಕಲಿಗ ಸಮುದಾಯದವನ್ನಾಗಿದ್ದು ಕೆಂಪೇಗೌಡ ಅವರು ಸಮುದಾಯ ಮಹಾನ್ ನಾಯಕರಾಗಿದ್ದರು ಅವರಿಗೆ ಆಗಿರುವ ಅಪಮಾನ ಸಹಿಸಲು ಸಾಧ್ಯವಿಲ್ಲ, ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ, ಈ ಸಂಬಂಧ ತುರ್ತಾಗಿ ಅಧಿಕಾರಿಗೊಂದಿಗೆ ಚರ್ಚಿಸಿ ಕರ್ತವ್ಯ ಲೋಪ ಎಸಗಿರುವ ಎಷ್ಟೇ ದೊಡ್ಡ ಅಧಿಕಾರಿ ಆಗಿರಲಿ ಅಥವಾ ಇನ್ಯಾರೇ ಆಗಿರಲ್ಲಿ ಅವರ ವಿರುದ್ದ ಕ್ರಮಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next