Advertisement

ಕುಣಿಗಲ್: ನಿಂತಿದ್ದ ಟ್ಯಾಂಕರ್ ಗೆ ಬೈಕ್ ಢಿಕ್ಕಿಯಾಗಿ ಮೈಸೂರಿನ ಯುವಕ ಸಾವು

01:51 PM Jun 15, 2022 | Team Udayavani |

ಕುಣಿಗಲ್ : ನಿಂತಿದ್ದ ಹಾಲಿನ ಟ್ಯಾಂಕರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಚಾಕೇನಹಳ್ಳಿ ಬಳಿ ಬುಧವಾರ ಸಂಭವಿಸಿದೆ.

Advertisement

ಮೈಸೂರಿನ ನವೀನ್ ಕುಮಾರ್( 28) ಮೃತ ಯುವಕ. ಕುಣಿಗಲ್ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದ್ದು, ಕೆಲಸದ ನಿಮಿತ್ತ ಎಡಿಯೂರು ಕಡೆಗೆ ಹೊಗುತ್ತಿರಬೇಕಾದರೆ, ಚಾಕೇನಹಳ್ಳಿ ಸಮೀಪ ನಿಂತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಅಮೃತ್ತೂರು ಠಾಣೆಯ ವೃತ್ತ ನಿರೀಕ್ಷಕ ಅರುಣ್ ಸಾಲುಂಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next