Advertisement

Kunigal; ಕಾಣೆಯಾಗಿದ್ದ 22 ರ ಹರೆಯದ ವಿವಾಹಿತೆಯ ಅಸ್ಥಿಪಂಜರ ಪತ್ತೆ!

10:46 PM Dec 29, 2023 | Team Udayavani |

ಕುಣಿಗಲ್ : ಕಾಣೆಯಾಗಿದ್ದ ಗೃಹಿಣಿಯೋರ್ವಳ ಅಸ್ಥಿಪಂಜರವಾಗಿ ದೊರಕಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಕಿತ್ನಾಮಂಗಲ ಕೆರೆಯಲ್ಲಿ ಶುಕ್ರವಾರ ನಡೆದಿದೆ. ಕಸಬಾ ಹೋಬಳಿ ಕಲ್ಲಪಾಳ್ಯ ಗ್ರಾಮದ ರಂಜಿತ( 22) ಮೃತ ದುರ್ದೈವಿ.

Advertisement

ನಿಟ್ಟೂರು ಕೆಂಪನಹಳ್ಳಿ ಗ್ರಾಮದ ರಂಜಿತ ಕಲ್ಲಪಾಳ್ಯ ಗ್ರಾಮದ ಚಂದ್ರಯ್ಯ ಅವರೊಂದಿಗೆ 2020 ರಲ್ಲಿ ವಿವಾಹವಾಗಿದ್ದು, ಇವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ ಎನ್ನಲಾಗಿದೆ. ಕಳೆದ ಹಲವು ತಿಂಗಳಿನಿಂದ ಕಾಣೆಯಾಗಿದ್ದ ರಂಜಿತ ಮನೆಗೆ ವಾಪಸಾಗಿರಲಿಲ್ಲ, ಆದರೆ ಇಂದು ಕಿತ್ನಾಮಂಗಲ ಕೆರೆಯಲ್ಲಿ ಅಸ್ಥಿ ಪತ್ತೆಯಾಗಿದೆ.

ಕಾಲಚೈನು, ಬಟ್ಟೆಯಿಂದ ಪತ್ತೆ
ಮೃತ ರಂಜಿತಾಳ ಶವವನ್ನು ಸಂಬಂಧಿಕರು ಕಾಲಚೈನು ಹಾಗೂ ಬಟ್ಟೆಯಿಂದ ಪತ್ತೆ ಹಚ್ಚಿದ್ದು ಎಪ್ ಎಸ್ ಎಲ್ ವರದಿಯಿಂದ ಮತಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ. ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next