Advertisement

ಕುಣಿಗಲ್ : ಸೌದೆ ತುಂಡು ತಲೆಗೆ ಬಿದ್ದು ಕಾರ್ಮಿಕ ಸಾವು

09:18 PM Jul 07, 2022 | Team Udayavani |

ಕುಣಿಗಲ್ : ಬಾಯ್ಲರ್‌ಗೆ ಸೌದೆ ಹಾಕುತ್ತಿದ್ದ ವ್ಯಕ್ತಿಯೋರ್ವನ ತಲೆಯ ಮೇಲೆ ಸೌದೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ, ತಾಲೂಕಿನ ಅಮೃತೂರು ಹೋಬಳಿ ಹೆಗ್ಗತಿಹಳ್ಳಿ ಜೆಪಿ ಡಿಸ್ಟಲರಿ ಕಾರ್ಖಾನೆಯಲ್ಲಿ ನಡೆದಿದೆ,

Advertisement

ಹೆಗ್ಗತ್ತಿಹಳ್ಳಿ ಗ್ರಾಮದ ಕುಮಾರ್ (48) ಮೃತ ವ್ಯಕ್ತಿ.

ಘಟನೆ ವಿವರ : ಹೆಗ್ಗತ್ತಿಹಳ್ಳಿ ಜೆಪಿ ಜೆಪಿ ಡಿಸ್ಟಲರಿ ಕಾರ್ಖಾನೆಯಲ್ಲಿ ಕುಮಾರ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಬುಧವಾರ ಲಾರಿಯಿಂದ ಸೌದೆ ಇಳಿಸಿ ಬಾಯ್ಲರ್‌ಗೆ ಹಾಕುವ ವೇಳೆ ಸೌದೆ ತುಂಡು ಕುಮಾರನ ತಲೆಗೆ ಬಿದ್ದ ಕಾರಣ ತೀವ್ರವಾಗಿ ಗಾಯಗೊಂಡರು, ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಕುಮಾರ್ ಮೃತಪಟ್ಟಿದ್ದಾನೆ, ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನೂಪುರ್ ಶರ್ಮಾ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next