Advertisement

ಕುಣಿಗಲ್: ಬೈಕ್ ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು

10:37 PM Oct 30, 2022 | Team Udayavani |

ಕುಣಿಗಲ್ : ಬೈಕ್ ಅಪಘಾತಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ರಾಜ್ಯ ಹೆದ್ದಾರಿ 33 ರ ಹಾಲಗೋನಹಳ್ಳಿ ಗ್ರಾಮ ಬಳಿ ಭಾನುವಾರ ರಾತ್ರಿ ನಡೆದಿದೆ. ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ಪ್ರವೀಣ್ (20) ಮೃತ ದುರ್ದೈವಿ.

Advertisement

ಘಟನೆ ವಿವರ
ಮೃತ ಪ್ರವೀಣ್ ಕೊತ್ತಗೆರೆ ಹೋಬಳಿ ಹೊನ್ನೇನಹಳ್ಳಿ ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆಗೆಂದು ಹೊಗಿದ್ದ ಎನ್ನಲಾಗಿದ್ದು ಆದರೆ ಹೊನ್ನೇನಹಳ್ಳಿಗಿಂತ ದೂರ ಇರುವ ಹಾಲಗೋನಹಳ್ಳಿ ಬಳಿ ಅಪಘಾತವಾಗಿ ಮೃತಪಟ್ಟಿದ್ದು ಹಲವು ಹನುಮಾನಕ್ಕೆ ಕಾರಣವಾಗಿದೆ ಎಂದು ಮೃತನ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next