Advertisement

Kunigal: ವಾಟ್ಯ್ಸಾಪ್‌ನಲ್ಲಿ ಸಹೋದರನಿಗೆ ವಿಡಿಯೋ ಕಳಿಸಿ ಯುವಕ ಆತ್ಮಹತ್ಯೆ

05:24 PM Aug 04, 2024 | Team Udayavani |

ಕುಣಿಗಲ್: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೊಬ್ಬ  ತನ್ನ ಸಹೋದರನಿಗೆ ವಾಟ್ಯ್ಸಾಪ್‌  ವಿಡಿಯೋ ಕಳಿಸಿ ಕುಣಿಗಲ್ ದೊಡ್ಡಕೆರೆಯ ಕೋಡಿ ಹಾಲಮಡುವಿನ ನಾಲೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.

Advertisement

ಪಟ್ಟಣದ ಮಹವೀರ ನಗರದ ವಾಸಿ ಬಿ.ಆನಂದ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಘಟನೆ ವಿವರ :
ಬಿ.ಆನಂದ್ ಕುಣಿಗಲ್ ತಾಲೂಕಿನ ಅಂಚೇಪಾಳ್ಯ ವಸಾಹತು ಪ್ರದೇಶದ ವಿನರ್‌ ಬರ್ಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನ್ನು ಆ. 2ರಂದು ಶುಕ್ರವಾರ ಆನಂದ್ ಮನೆಯಿಂದ ತೆರಳಿದವನು ಮತ್ತೆ ಮನೆಗೆ ವಾಪಸ್‌ ಬರಲಿಲ್ಲ, ಈ ಸಂಬಂಧ ಸಂಬಂಧಿಕರು ಎಲ್ಲೆಡೆ ಹುಡುಕಿದರು ಆನಂದ್ ಪತ್ತೆ ಆಗಿರಲಿಲ್ಲ.

ತಮ್ಮನಿಗೆ ವಿಡಿಯೋ ಕಳಿಸಿ ಆತ್ಮಹತ್ಯೆ :
ಆನಂದ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಹೋದರ ಸಾಗರ್‌ಗೆ ವಿಡಿಯೋ ಮಾಡಿ ನನ್ನ ಸಾವಿಗೆ ಯಾರು ಕಾರಣರಲ್ಲ, ನನಗೆ ಬದುಕಬೇಕು ಅನಿಸುತ್ತಿಲ್ಲ ಹಾಗಾಗಿ ನಾನು ಸಾಯುತ್ತಿದ್ದೇನೆ ಎಂದು ವಾಟ್ಯ್ಸಾಪ್‌ ವಿಡಿಯೋ ಕಳಿಸಿ ಕುಣಿಗಲ್ ದೊಡ್ಡಕೆರೆಯ ಕೋಡಿಯ ಹಾಲಮಡುವಿನ ನಾಲೆಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಸಾಗರ್ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಾಲೆಯಿಂದ ಶವ ಹೊರತೆಗೆದ ಎಎಸ್‌ಐ :
ದೊಡ್ಡಕೆರೆ ಸೇರಿದಂತೆ ಯಾವುದೇ ಕೆರೆಕಟ್ಟೆಗಳಲ್ಲಿ ನೀರು ಇಲ್ಲದಿದ್ದರೂ ಇಲ್ಲಿನ ಹಾಲಮಡುವು ಎಂದು ಭತ್ತಿ ಹೋದ  ಉದಾಹರಣೆ ಇಲ್ಲ, ಸದಾ ಈ ನಾಲೆಯಲ್ಲಿ ನೀರು ತುಂಬಿರುತ್ತದೆ, ಇದರ ಆಳ ಸುಮಾರು 25 ಅಡಿಗೂ ಅಧಿಕವಿದ್ದು, ಈ ನಾಲೆಯಲ್ಲಿ ಶವ ತೇಲುತ್ತಿದ್ದನ್ನು ಗಮನಿಸಿದ ಕೊತ್ತೆಗೆರೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ತೆರಳಿದ ಕುಣಿಗಲ್ ಪೊಲೀಸ್ ಠಾಣೆಯ ಎಎಸ್‌ಐ ಶ್ರೀಧರ್ ಶವ ಹೊರಗೆ ತೆಗೆಯುಲು ಜನರ ಹುಡುಕಿದ್ದಾರೆ ಯಾರು ಸಿಗದಿದ್ದಾಗ ಅವರೇ ಟೋಬ್ ಸಹಾಯದಿಂದ ನಾಲೆಗೆ ಇಳಿದು ಶವವನ್ನು ಮೇಲೆತ್ತುವ ಮೂಲಕ ನಾಗರಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next