Advertisement

Kundapura ಹೆದರಿಸಿ ಹಣ ವಸೂಲಿ: ದೂರು

11:49 PM Nov 01, 2023 | Team Udayavani |

ಕುಂದಾಪುರ: ನೆರೆ ಮನೆಯ ಯುವಕನೊಬ್ಬನನ್ನು ಪುಸಲಾಯಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಎಂದು ದೂರು ನೀಡುವುದಾಗಿ ಹೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಕುಂದಾಪುರ ಮಾವಿನಕಟ್ಟೆಯ ಮಹಿಳೆಯೊಬ್ಬರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮಾವಿನಕಟ್ಟೆಯ ಮಹಿಳೆಯೊಬ್ಬರು ಅದೇ ಊರಿನ ನಿವಾಸಿ ನವಾಜ್‌ ಅವರನ್ನು ಮನೆಗೆ ಹಾಲು ತರಲೆಂದು ಕರೆಸಿ ಮೈಮೇಲೆ ಎರಗಿ ದೈಹಿಕ ಸಂಪರ್ಕಕ್ಕೆ ಪ್ರಯತ್ನಪಟ್ಟಿದ್ದು, ತಾನು ಗರ್ಭವತಿಯೆಂದು, ಇದಕ್ಕೆ ನೀನೇ ಕಾರಣ ಎಂದಿದ್ದಾರೆ. ಅತ್ಯಾಚಾರದ ದೂರು ದಾಖಲಿಸುವುದಾಗಿ ಹೇಳಿ 5 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದು, 30 ಸಾವಿರ ರೂ. ಪಡೆದಿದ್ದಾರೆ ಎಂದು ನವಾಜ್‌ ದೂರಿನಲ್ಲಿ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next