Advertisement

Kundapura: ಖಾಸಗಿ ಬಸ್‌ಗಳ ಢಿಕ್ಕಿ: 7 ಮಂದಿಗೆ ಗಾಯ

12:05 AM Sep 18, 2024 | Team Udayavani |

ಕುಂದಾಪುರ: ಹೆಮ್ಮಾಡಿ ಗ್ರಾಮದ ಕಾಶಿ ಮಠದ ಹತ್ತಿರ ಸೋಮವಾರ ರಾತ್ರಿ ಖಾಸಗಿ ಬಸ್‌ಗಳೆರಡು ಢಿಕ್ಕಿಯಾಗಿ 7ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಪ್ರಯಾಣಿಕರನ್ನು ಅಲ್ಲೇ  ಇಳಿಸಿ ಬಸ್‌ ಅನ್ನು ಬೆಂಗಳೂರು ಕಡೆಗೆ ಕೊಂಡೊಯ್ದ ಚಾಲಕ ಅಮಾನವೀಯತೆ ಪ್ರದರ್ಶಿಸಿದ ಘಟನೆ ಇದಾಗಿದೆ.

Advertisement

ಅದೇ ಬಸ್‌ನಲ್ಲಿದ್ದ ಪ್ರಯಾಣಿಕ ಹೇರೂರು ಗ್ರಾಮದ ರಾಗಿಹಕ್ಲುವಿನ ಸುಧೀರ್‌ ದೂರು ನೀಡಿದ್ದಾರೆ. ಭಟ್ಕಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ ಚಾಲಕ ಲೋಕೇಶ್‌ ಬಸ್ಸನ್ನು ಪ್ರಯಾಣಿಕರನ್ನು ಹತ್ತಿಸಲು ಯಾವುದೇ ಸೂಚನೆ ನೀಡದೆ ಒಮ್ಮೆಲೆ ರಸ್ತೆಯಲ್ಲಿ ನಿಲ್ಲಿಸಿದಾಗ ಹಿಂದಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಿರಣ್‌ ಚಲಾಯಿಸುತ್ತಿದ್ದ ಇನ್ನೊಂದು ಖಾಸಗಿ ಬಸ್‌ ಢಿಕ್ಕಿಯಾಗಿದೆ.

ಪರಿಣಾಮ ಬೆಂಗಳೂರು ಬಸ್‌ನಲ್ಲಿದ್ದ ಸುಧೀರ್‌, ರೇವತಿ, ಜಾನು ಹಾಗೂ ಇತರ ಪ್ರಯಾಣಿಕರಿಗೂ ಗಾಯವಾಗಿದೆ. ಹಿಂದಿನಿಂದ ಢಿಕ್ಕಿ ಹೊಡೆದ ಬಸ್‌ನಲ್ಲಿದ್ದ ಚಾಲಕ ಕಿರಣ, ಕಂಡಕ್ಟರ್‌ ರಾಜು, ಪ್ರಯಾಣಿಕರಾದ ಚೇತನಾ, ಪ್ರತ್ಯುಷಾ, ಲಾವಣ್ಯ ಸಿಂಗ್‌ ಹಾಗೂ ಇತರ ಪ್ರಯಾಣಿಕರಿಗೂ ಗಾಯಗಳಾಗಿದೆ.

ಎರಡೂ ಖಾಸಗಿ ಬಸ್‌ಗಳ ಚಾಲಕರು ಗಾಯಗೊಂಡ ಪ್ರಯಾಣಿಕರನ್ನು ರಸ್ತೆಯಲ್ಲೇ ಬಿಟ್ಟು ಬಸ್ಸಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸಾರ್ವಜನಿಕರು ರಿಕ್ಷಾದಲ್ಲಿ ಚಿಕಿತ್ಸೆಗೆ ಕುಂದಾಪುರದ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next