Advertisement

Kundapura ವಿಪರೀತ ಮಾತ್ರೆ ಸೇವನೆ: ಯುವಕ ಸಾವು

08:57 PM Dec 31, 2023 | Team Udayavani |

ಕುಂದಾಪುರ: ಮೂರ್ಛೆ ರೋಗದ ಸುಮಾರು 150 ರಷ್ಟು ಮಾತ್ರೆ ಸೇವಿಸಿ, ಅಸ್ವಸ್ಥಗೊಂಡಿದ್ದ ಹಂಗಳೂರಿನ ಸಚಿನ್‌ (27) ಚಿಕಿತ್ಸೆಗೆ ಸ್ಪಂದಿಸದೆ ಡಿ. 30ರಂದು ರಾತ್ರಿ ಸಾವನ್ನಪ್ಪಿದ್ದಾರೆ.

Advertisement

ಮೂಛೆì ರೋಗದಿಂದ ಬಳಲುತ್ತಿದ್ದ ಅವರು ಖನ್ನತೆಗೆ ಒಳಗಾಗಿದ್ದರು. ಡಿ. 29ರಂದು ಸಂಜೆ 7.15ರ ಸುಮಾರಿಗೆ ವಿಪರೀತ ಮಾತ್ರೆ ತೆಗೆದುಕೊಂಡಿದ್ದು, ಮನೆ ಸಮೀಪದ ಶಾಲೆ ಬಳಿ ಅಸ್ವಸ್ಥಗೊಂಡಿದ್ದರು.

ಕೂಡಲೇ ಅವರನ್ನು ಅಂಕದಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಹಾಗೂ ಬಳಿಕ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೊನೆಯುಸಿರೆಳೆದರು.

ಮಾವ ರಾಜು ಅವರ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next