Advertisement

ಕುಂದಾಪುರ: ಅನಾರೋಗ್ಯಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ

12:27 AM Jan 12, 2023 | Team Udayavani |

ಕುಂದಾಪುರ: ಕುಂಭಾಶಿ ಗ್ರಾಮದ ದೇವಾಡಿಗರ ಬೆಟ್ಟುವಿನ ನಿವಾಸಿ ಎಚ್‌. ನಾಗ ಮೊಗೇರ ಅವರ ಪತ್ನಿ ಗಿರಿಜಾ (67) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 10ರ ರಾತ್ರಿ 12 ಗಂಟೆಯಿಂದ ಜ. 11ರ ಬೆಳಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ಸಂಭವಿಸಿದೆ.

Advertisement

ಕಳೆದ 2-3 ತಿಂಗಳಿನಿಂದ ವಿಪರೀತ ಹೊಟ್ಟೆ ಉರಿ ಹಾಗೂ ನಿದ್ರಾ ಹೀನತೆಯಿಂದ ಬಳಲುತ್ತಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಸಹ ಕೊಡಿಸಲಾಗಿತ್ತು. ಅನಾರೋಗ್ಯದಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next