Advertisement

Kundapura ವರದಕ್ಷಿಣೆ ಹಿಂಸೆ; ಕೇಸು ದಾಖಲು

12:18 AM Jan 04, 2024 | Team Udayavani |

ಕುಂದಾಪುರ: ಹೆಮ್ಮಾಡಿ ಗ್ರಾಮದ ಫೌಜಿಯಾ (34) ಅವರು ಪತಿ ಹಾಗೂ ಅವರ ಮನೆಯವರ ವಿರುದ್ಧ ವರದಕ್ಷಿಣೆ ಹಿಂಸೆ ಕೇಸು ದಾಖಲಿಸಿದ್ದಾರೆ.

Advertisement

ಭಟ್ಕಳದ ಅಬ್ದುಲ್‌ ಗನಿ (42) ಅವರನ್ನು ಮದುವೆಯಾಗಿದ್ದು ವಿವಾಹ ಪೂರ್ವದಲ್ಲಿ 40 ಪವನ್‌ ಚಿನ್ನ, 10 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇರಿಸಿ 25 ಪವನ್‌ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ಪಡೆದಿದ್ದರು. ಬಳಿಕ ಹೆಚ್ಚಿನ ವರದಕ್ಷಿಣೆಗೆ ಪೀಡಿಸಿ 3 ಲಕ್ಷ ರೂ. ಪಡೆದಿದ್ದಾರೆ.

ಬೈದು ಕೊಲೆ ಬೆದರಿಕೆ ಹಾಕಿ, ವರದಕ್ಷಿಣೆಗೆ ಪೀಡಿಸಿದ್ದಾರೆ ಎಂದು ಪತಿ ಗನಿ, ಬೀಬಿ ಶರೀಫಾ (58), ಮಹಮ್ಮದ್‌ ಜಾಫರ್‌ (40) ವಿರುದ್ಧ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next