Advertisement

Kundapura ದನದ ಮಾಂಸ ಸಾಗಾಟ ಪತ್ತೆ; ಆರೋಪಿ ಪರಾರಿ

12:54 AM Oct 08, 2023 | Team Udayavani |

ಕುಂದಾಪುರ: ಆನಗಳ್ಳಿ ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿ ಎಸ್‌ಐ ಪ್ರಸಾದ್‌ ಕುಮಾರ್‌ ನೇತೃತ್ವದ ಕುಂದಾಪುರ ಪೊಲೀಸರ ತಂಡ ತಪಾಸಣೆ ನಡೆಸುತ್ತಿದ್ದಾಗ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಲು ಹೇಳಿದಾಗ ಆತ ಪರಾರಿಯಾಗಿದ್ದು, ತಪಾಸಣೆ ನಡೆಸಿದಾಗ ಸುಮಾರು 10 ಕೆ.ಜಿ. ಜಾನುವಾರು ಮಾಂಸ ಪತ್ತೆಯಾಗಿದೆ.

Advertisement

ಆತ ಎಲ್ಲಿಂದಲೋ ಕಳವುಮಾಡಿ, ಅಕ್ರಮವಾಗಿ ಮಾಂಸವನ್ನು ಮಾರಾಟಕ್ಕೆ ಸಾಗಾಟ ಮಾಡು
ತ್ತಿರುವುದಾಗಿ ತಿಳಿದು ಬಂದಿದೆ.

ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವಾಗ ಪ್ರಭಾಕರ ಎಂಬುವರ ಮನೆಯ ಬಳಿ ಕೈ ಚೀಲದಲ್ಲಿ ದನದ ಮಾಂಸ ಪತ್ತೆಯಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next