Advertisement

ಕುಂದಾಪುರ : ಪೊಲೀಸರ ಮೇಲೆ ಹಲ್ಲೆ ಪ್ರಕರಣ: ಇಬ್ಬರಿಗೆ ನಿರೀಕ್ಷಣ ಜಾಮೀನು

10:30 PM Jun 18, 2022 | Team Udayavani |

ಕುಂದಾಪುರ : ಕೋಟದ ಕೊರಗರ ಕಾಲನಿಯ ರಾಜೇಶ್‌ ಅವರ ಮೆಹೆಂದಿ ಕಾರ್ಯಕ್ರಮದಲ್ಲಿ ಕೊರಗರ ಮೇಲಿನ ಕೋಟ ಪೊಲೀಸರ ದೌರ್ಜನ್ಯ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ್‌ ಪುತ್ರನ್‌ ಹಾಗೂ ನಾಗೇಂದ್ರ ಪುತ್ರನ್‌ ಅವರಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.

Advertisement

ಕೊರಗ ಸಮುದಾಯದ ರಾಜೇಶ್‌ ಕೋಟ ಎಸ್‌ಐ ಸಂತೋಷ್‌ ಬಿ. ಪಿ. ಮತ್ತಿತರರ ವಿರುದ್ಧ ದಾಖಲಿಸಿದ ದೂರಿಗೆ ಪ್ರತಿಯಾಗಿ, ರಾಜೇಶ್‌, ನಾಗೇಂದ್ರ ಪುತ್ರನ್‌ ಹಾಗೂ ನಾಗರಾಜ ಪುತ್ರನ್‌ ಮತ್ತಿತರರು ಹಲ್ಲೆ ನಡೆಸಿ, ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ಜಾತಿ ನಿಂದನೆ ಮಾಡಿರುವುದಾಗಿ ಕೋಟ ಠಾಣೆಯ ಕಾನ್‌ಸ್ಟೆಬಲ್‌ ಜಯರಾಮ್‌ ಪ್ರತಿದೂರು ನೀಡಿದ್ದರು.

ಈ ಕುರಿತಂತೆ ಕೋಟ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿತ್ತು. ಆರೋಪಿಗಳ ಪರ ಕುಂದಾಪುರದ ವಕೀಲರಾದ ಶ್ಯಾಮ ಸುಂದರ ನಾಯರಿ ಹಾಗೂ ನೀಲ್‌ ಬ್ರಿಯಾನ್‌ ಪಿರೇರಾ ವಾದಿಸಿದ್ದರು.

ಇದನ್ನೂ ಓದಿ : ಹುಣಸೂರು : ಕಾರಿನ ಟೈರ್ ಪಂಚರ್ ಆಗಿ ಟ್ಯಾಂಕರ್ ಗೆ ಢಿಕ್ಕಿ; ಯುವತಿಯರಿಬ್ಬರ ಸಾವು

Advertisement

Udayavani is now on Telegram. Click here to join our channel and stay updated with the latest news.

Next