Advertisement

Kundapura ಬೈಕ್‌ಗೆ ರಿಕ್ಷಾ ಢಿಕ್ಕಿ; ಸವಾರನಿಗೆ ಗಾಯ

09:46 PM Mar 01, 2024 | Team Udayavani |

ಕುಂದಾಪುರ: ವಡೇರಹೋಬಳಿ ಗ್ರಾಮದ ರಾ.ಹೆ. 66ರ ಸರ್ವಿಸ್‌ ರಸ್ತೆಯಲ್ಲಿ ಬೈಕ್‌ಗೆ ರಮೇಶ್‌ ಅವರ ರಿಕ್ಷಾ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಅಬ್ದುಲ್‌ ಸತ್ತರ್‌ (46) ಗಾಯಗೊಂಡ ಘಟನೆ ಫೆ. 29ರ ಸಂಜೆ ಸಂಭವಿಸಿದೆ.

Advertisement

ಗಾಯಗೊಂಡ ಅಬ್ದುಲ್‌ ಸತ್ತರ್‌ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಲಾರಿ ಢಿಕ್ಕಿ; ಸವಾರನಿಗೆ ಗಾಯ
ಕುಂದಾಪುರ: ಕಾವ್ರಾಡಿ ಗ್ರಾಮದ ವಾಲೂ¤ರು ಕ್ರಾಸ್‌ ಬಳಿಯ ರಸ್ತೆಯಲ್ಲಿ ಬೈಕ್‌ಗೆ ಟಿಪ್ಪರ್‌ ಲಾರಿ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ನಾಗರಾಜ (37) ಅವರು ಗಾಯಗೊಂಡ ಘಟನೆ ಮಾ. 1 ರ ಬೆಳಗ್ಗೆ 9.30ರ ಸುಮಾರಿಗೆ ಸಂಭವಿಸಿದೆ.

ಎಡ ಕಾಲಿನ ಮೂಳೆ ಮುರಿತದಿಂದಾಗಿ ನಾಗರಾಜ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್‌ ಚಾಲಕ ಸತೀಶ ಅವರ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next