Advertisement

Kundapura: ಈಚರ್‌ ಢಿಕ್ಕಿ ; ಪಾದಚಾರಿಗೆ ಗಾಯ

08:11 PM Jun 20, 2024 | Team Udayavani |

ಕುಂದಾಪುರ: ಹಂಗಳೂರು ಗ್ರಾಮದ ರಾ.ಹೆ. 66ರ ಏಕಮುಖ ರಸ್ತೆ ಬದಿಯಲ್ಲಿ ನಿಂತಿದ್ದ ವಡೇರಹೋಬಳಿ ನಿವಾಸಿ ಗೋಪಾಲಕೃಷ್ಣ (67) ಅವರು ಅಪರಿಚಿತ ಈಚರ್‌ ವಾಹನ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಜೂ.19ರಂದು ಸಂಜೆ  ಸಂಭವಿಸಿದೆ.

Advertisement

ಢಿಕ್ಕಿಯಾದ  ವಾಹನ ನಿಲ್ಲಿಸದೆ ಬೈಂದೂರು ಕಡೆಗೆ ಪರಾರಿಯಾಗಿದೆ.  ಗೋಪಾಲಕೃಷ್ಣರ ಪುತ್ರ ಅಜಯ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next