Advertisement

Kundapura 39 ವರ್ಷದ ಹಿಂದಿನ ಪ್ರಕರಣದ ಆರೋಪಿ ಸೆರೆ

10:46 PM Nov 11, 2023 | Team Udayavani |

ಕುಂದಾಪುರ: ಕಳೆದ 39 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ. ಗುಜ್ಜಾಡಿಯ ನಿವಾಸಿ ಪ್ರಕಾಶ್‌ (62) ಬಂಧಿತ ಆರೋಪಿ.

Advertisement

1984ರಲ್ಲಿ ಹಲ್ಲೆ ಪ್ರಕರಣವೊಂದರ ಆರೋಪಿಯಾಗಿರುವ ಪ್ರಕಾಶ್‌ ಕಳೆದ 39 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಮುಂಬಯಿಯಲ್ಲಿ ಗಣೇಶ್‌ ಎಂಬ ಹೆಸರು ಬದಲಾಯಿಸಿಕೊಂಡು, ತಿರುಗಾಡುತ್ತಿದ್ದರು. ಅನೇಕ ವರ್ಷಗಳಿಂದ ಊರಿಗೆ ಬಂದಿರಲಿಲ್ಲ.

ಮುಂಬಯಿಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಕುಂದಾಪುರದ ನಿರೀಕ್ಷಕ ನಂದ ಕುಮಾರ್‌ಯು.ಬಿ. ನೇತೃತ್ವದಲ್ಲಿ ಎಸ್‌ ಐ ವಿನಯ ಎಂ. ಕೊರ್ಲಹಳ್ಳಿ, ಸಿಬಂದಿಯಾದ ಶ್ರೀಧರ, ರಾಮ, ಸಂತೋಷ್‌, ಚಂದ್ರಶೇಖರ ಅವರ ತಂಡ ಕಾರ್ಯಾಚರಣೆ ನಡೆಸಿ, ಮುಂಬಯಿನ ಅಂಧೇರಿ ಈಸ್ಟ್ ಪರಿಸರದ ಸಾಕಿನಾಕ ಎಂಬಲ್ಲಿ ಗುರುವಾರ ಬಂಧಿಸಿದ್ದಾರೆ. ಸೆರೆ ಸಿಕ್ಕ ಆರೋಪಿಯನ್ನು ಶುಕ್ರವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next