Advertisement

ಕುಂದಾಪುರ : ತಮ್ಮನಿಂದಲೇ ಅಕ್ಕನ ಕೊಲೆ

09:36 AM Jul 29, 2018 | Team Udayavani |

ಕುಂದಾಪುರ: ಹಣಕ್ಕಾಗಿ ಪೀಡಿಸಿದ ತಮ್ಮನು ಅಕ್ಕನನ್ನು ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಕುಂದಾಪುರದಲ್ಲಿ ಸಂಭವಿಸಿದೆ. 

Advertisement

ಕುಂದೇಶ್ವರ ದೇವಸ್ಥಾನದ ಹಿಂಭಾಗದ ವಡೇರಹೋಬಳಿ ಗ್ರಾಮದ ಹಂದೇರ ಕೇರಿಯ ದಿ| ಶೀನ ಭಂಡಾರಿ ಅವರ ಪುತ್ರಿ ವಿಜಯಾ ಭಂಡಾರಿ (50)  ಕೊಲೆಗೀಡಾದವರು. ಅಣ್ಣಪ್ಪ ಭಂಡಾರಿ  (45) ಆರೋಪಿ. 

ಅಣ್ಣಪ್ಪ ಭಂಡಾರಿ ಸಂಗಮ್‌ ಬಳಿ ಸೆಲೂನ್‌  ಹೊಂದಿದ್ದರೂ  ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಹಣ ನೀಡುವಂತೆ ಹಾಗೂ ತನ್ನ ಮನೆ ಕೆಲಸವನ್ನು ಮಾಡಿಕೊಡುವಂತೆ ಅಕ್ಕನನ್ನು ಪೀಡಿಸುತ್ತಿದ್ದರು. ವಿಜಯಾ ಭಂಡಾರಿ ಅವಿವಾಹಿತೆಯಾಗಿದ್ದು, ಅಕ್ಕ ಮತ್ತು ತಮ್ಮ ಒಂದೇ ವಠಾರದಲ್ಲಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದರು. 
ಜು.22ರ ರಾತ್ರಿ ಆರೋಪಿಯು ಅಕ್ಕನ ಮನೆಗೆ ಬಂದು ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿ ಸಿದ್ದ.

ಚಿಂತಾಜನಕ ಸ್ಥಿತಿಯಲ್ಲಿದ್ದ ವಿಜಯಾ ಭಂಡಾರಿ ಮಣಿಪಾಲ ಆಸ್ಪತ್ರೆಯಲ್ಲಿ ಜು. 28ರಂದು ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಕುಂದಾಪುರ  ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next