Advertisement
ಕುಂದೇಶ್ವರ ದೇವಸ್ಥಾನದ ಹಿಂಭಾಗದ ವಡೇರಹೋಬಳಿ ಗ್ರಾಮದ ಹಂದೇರ ಕೇರಿಯ ದಿ| ಶೀನ ಭಂಡಾರಿ ಅವರ ಪುತ್ರಿ ವಿಜಯಾ ಭಂಡಾರಿ (50) ಕೊಲೆಗೀಡಾದವರು. ಅಣ್ಣಪ್ಪ ಭಂಡಾರಿ (45) ಆರೋಪಿ.
ಜು.22ರ ರಾತ್ರಿ ಆರೋಪಿಯು ಅಕ್ಕನ ಮನೆಗೆ ಬಂದು ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿ ಸಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ವಿಜಯಾ ಭಂಡಾರಿ ಮಣಿಪಾಲ ಆಸ್ಪತ್ರೆಯಲ್ಲಿ ಜು. 28ರಂದು ಸಾವನ್ನಪ್ಪಿದ್ದಾರೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಕುಂದಾಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.